Select Your Language

Notifications

webdunia
webdunia
webdunia
webdunia

ಮಂಡ್ಯ ಚುನಾವಣಾಧಿಕಾರಿ 24 ಗಂಟೆಯಲ್ಲಿ ಜಾಗ ಖಾಲಿ ಮಾಡಬೇಕು- ಯಡಿಯೂರಪ್ಪ ಆಗ್ರಹ

ಮಂಡ್ಯ ಚುನಾವಣಾಧಿಕಾರಿ 24 ಗಂಟೆಯಲ್ಲಿ ಜಾಗ ಖಾಲಿ ಮಾಡಬೇಕು- ಯಡಿಯೂರಪ್ಪ ಆಗ್ರಹ
ಬೆಳಗಾವಿ , ಸೋಮವಾರ, 1 ಏಪ್ರಿಲ್ 2019 (12:44 IST)
ಬೆಳಗಾವಿ : ಮಂಡ್ಯದಲ್ಲಿ ಸುಮಲತಾ ಪರ ಅಲೆ ಇದೆ. ಹೀಗಾಗಿ ಆಡಳಿತ ವ್ಯವಸ್ಥೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು  ಸಿಎಂ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.


ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,’ ರದ್ದಾಗುತ್ತಿದ್ದ ನಾಮಪತ್ರವನ್ನು ಸರಿಪಡಿಸಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿರುವುದು ಅಪರಾಧ. ಮಂಡ್ಯ ಚುನಾವಣಾಧಿಕಾರಿ 24 ಗಂಟೆಯಲ್ಲಿ ಜಾಗ ಖಾಲಿ ಮಾಡಬೇಕು.  ಪ್ರಾಮಾಣಿಕ ಅಧಿಕಾರಿಯನ್ನ ನೇಮಿಸಿ, ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


ಅಲ್ಲದೇ ‘ನಿಖಿಲ್ ಕುಮಾರ್ ನಾಮಪತ್ರ ರದ್ದು ಆಗಲಿದೆ. ಈಗ ಆಗದೇ ಇದ್ದರೆ ಮುಂದೆ ಕೋರ್ಟ್ ನಲ್ಲಿ ಆಗಲಿದೆ. ಸಿಎಂ ಮಗನ ಸೋಲಿನ ಭೀತಿಯಿಂದ ಹತಾಶರಾಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚಾಲೆಂಜಿಂಗ್ ಸ್ಟಾರ್, ನಾಳೆಯಿಂದ ರಾಕಿಂಗ್ ಸ್ಟಾರ್: ಮಂಡ್ಯದಲ್ಲಿ ಫುಲ್ ಹವಾ!