Select Your Language

Notifications

webdunia
webdunia
webdunia
webdunia

ಸಿಕ್ಸರ್ ಬಾರಿಸುವುದು ಅಂದ್ರೆ ಹಣ ಹಂಚುವುದಾ?: ಖಾದರ್‌ಗೆ ಬಿಎಸ್‌ವೈ ಗುಡುಗು

ಸಿಕ್ಸರ್ ಬಾರಿಸುವುದು ಅಂದ್ರೆ ಹಣ ಹಂಚುವುದಾ?: ಖಾದರ್‌ಗೆ ಬಿಎಸ್‌ವೈ ಗುಡುಗು
ಗುಂಡ್ಲುಪೇಟೆ , ಸೋಮವಾರ, 27 ಮಾರ್ಚ್ 2017 (17:24 IST)
ಸಚಿವ ಯು.ಟಿ ಖಾದರ್ ಚುನಾವಣೆಯಲ್ಲಿ ಸಿಕ್ಸರ್ ಬಾರಿಸುವುದಾಗಿ ಹೇಳಿದ್ದರು. ಇದೇನಾ ಅವರು ಬಾರಿಸುವ ಸಿಕ್ಸರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
 
ಸಚಿವ ಖಾದರ್ ಅವರ ಕಾರು ಚಾಲಕ ಮತದಾರರಿಗೆ ಹಣ ಹಂಚುತ್ತಿರುವ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡುತ್ತೇವೆ. ಸದನದಲ್ಲಿ ಪ್ರಸ್ತಾಪಿಸಲು ಬಿಜೆಪಿ ನಾಯಕರಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಭ್ರಷ್ಟಾಚಾರದಿಂದ ಲೂಟಿ ಮಾಡಿದ ಹಣವನ್ನು ತಂದು ಇಲ್ಲಿ ಹಂಚುತ್ತಿದೆ. ಆದರೆ, ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಧೃಡಸಂಕಲ್ಪ ಹೊಂದಿದ್ದಾರೆ ಎಂದು ತಿರುಗೇಟು ನೀಡಿದರು.
 
ಹಣಬಲ, ತೋಳ್ಬಲ, ಅಧಿಕಾರಬಲದಿಂದ ಮತದಾರರನ್ನು ಗೆಲ್ಲಲು ಸಾಧ್ಯವಿಲ್ಲ. ಭ್ರಷ್ಟ ಸರಕಾರದ ವಿರುದ್ಧ ಜನತೆ ಮತಚಲಾಯಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನೀತಿ ಸಂಹಿತೆ ಉಲ್ಲಂಘನೆ: ಶ್ರೀನಿವಾಸ್ ಪ್ರಸಾದ್‌ಗೆ ಆಯೋಗದ ನೋಟಿಸ್