Select Your Language

Notifications

webdunia
webdunia
webdunia
webdunia

ತಾಯಿ ಚಾಮಂಡೇಶ್ವರಿ ಎಲ್ಲವನ್ನು ನೋಡಿಕೊಳ್ಳಲಿ: ಯಡಿಯೂರಪ್ಪ

ತಾಯಿ ಚಾಮಂಡೇಶ್ವರಿ ಎಲ್ಲವನ್ನು ನೋಡಿಕೊಳ್ಳಲಿ: ಯಡಿಯೂರಪ್ಪ
ಮೈಸೂರು , ಬುಧವಾರ, 29 ಮಾರ್ಚ್ 2017 (16:12 IST)
ನಾವು ದೈವ ಬಲವನ್ನು ನಂಬಿದವರಾಗಿರುವುದರಿಂದ ತಾಯಿ ಚಾಮಂಡೇಶ್ವರಿ ಎಲ್ಲವನ್ನು ನೋಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
ಮುಂದಿನ ಚುನಾವಣೆಯಲ್ಲಿ ಬೆಂಬಲಿಸುತ್ತೇವೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಇದೀಗ ಮಾತು ತಪ್ಪಿದ್ದಾರೆ ಎನ್ನುವ ಗೀತಾ ಮಹಾದೇವ್ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ತಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಅನುಭವಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಕಳೆದ ಯುಗಾದಿ ಹಬ್ಬದ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ರಾಜ್ಯಾಧ್ಯಕ್ಷನಾಗಿ ನೇಮಕಗೊಂಡಿದ್ದೇನೆ. ನೀವೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದಿದ್ದರು. ಅದರಂತೆ, ದೇವರ ದಯೆಯಿಂದ ಹೆಚ್ಚಿನ ಜನ ಬಿಜೆಪಿಯತ್ತ ಆಕರ್ಷಿಸುತ್ತಿದ್ದಾರೆ ಎಂದರು. 
 
ಗುಂಡ್ಲುಪೇಟೆ ತಾಲೂಕಿನ ಶೆಟ್ಟಳ್ಳಿಯಲ್ಲಿ ಮಾತನಾಡಿದ ಅವರು, ಯಾವ ಚುನಾವಣೆಯಲ್ಲೂ ಇಂತಹ ಜನ ಬೆಂಬಲ ನೋಡಿರಲಿಲ್ಲ. ಉಪಚುನಾವಣೆಯಲ್ಲಿ  ಬಿಜೆಪಿ ಜಯಭೇರಿ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಲವು ರಾಜ್ಯಗಳ ಸಂಸದರೊಂದಿಗೆ ಪ್ರಧಾನಿ ಮೋದಿ ಚರ್ಚೆ