Select Your Language

Notifications

webdunia
webdunia
webdunia
webdunia

ಜೈಲು ಶಿಕ್ಷೆ ಅನುಭವಿಸಿದ್ದವರಿಂದ ಭ್ರಷ್ಟಾಚಾರದ ಮಾತು: ಕೆ.ಜೆ.ಜಾರ್ಜ್ ಲೇವಡಿ

ಜೈಲು ಶಿಕ್ಷೆ ಅನುಭವಿಸಿದ್ದವರಿಂದ ಭ್ರಷ್ಟಾಚಾರದ ಮಾತು: ಕೆ.ಜೆ.ಜಾರ್ಜ್ ಲೇವಡಿ
ಬೆಂಗಳೂರು , ಶನಿವಾರ, 11 ಫೆಬ್ರವರಿ 2017 (15:57 IST)
ಭ್ರಷ್ಟಾಚಾರದಲ್ಲಿ ಜೈಲು ಶಿಕ್ಷೆ ಅನುಭವಿಸಿದವರು ಇದೀಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಚಿವ ಕೆ.ಜೆ.ಜಾರ್ಜ್ ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
 
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,ಮಾಜಿ ಸಿಎಂ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ತಾಂತ್ರಿಕ ಕಾರಣದಿಂದ ಕಾನೂನಿಂದ ತಪ್ಪಿಸಿಕೊಂಡಿದ್ದಾರೆ.  ಎಂದು ವ್ಯಂಗ್ಯವಾಡಿದರು.
 
ಇಂಥ ಬಿಎಸ್‌ವೈ ಸಿಎಂ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಾರೆ. ಸುಳ್ಳನ್ನೇ ಸತ್ಯ ಮಾಡಲು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಂತ್ರ ನಡೆಯಲ್ಲ ಎಂದು ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇತರರು ಸ್ನಾನ ಮಾಡುವಾಗ ಇಣುಕಿ ನೋಡುವುದು ಮೋದಿಗಿಷ್ಟ: ರಾಹುಲ್ ಗಾಂಧಿ