Select Your Language

Notifications

webdunia
webdunia
webdunia
webdunia

ಬ್ರಿಗೇಡ್ ಮುಂದುವರಿಕೆಗೆ ಯಡಿಯೂರಪ್ಪ ಸಮ್ಮತಿ: ಕೆ.ಎಸ್. ಈಶ್ವರಪ್ಪ

ಬ್ರಿಗೇಡ್ ಮುಂದುವರಿಕೆಗೆ ಯಡಿಯೂರಪ್ಪ ಸಮ್ಮತಿ: ಕೆ.ಎಸ್. ಈಶ್ವರಪ್ಪ
ಚಿತ್ರದುರ್ಗ , ಮಂಗಳವಾರ, 18 ಅಕ್ಟೋಬರ್ 2016 (16:29 IST)
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಚಿತ್ರದುರ್ಗದ ಮಾದಾರಗುರು ಪೀಠದ ಶ್ರೀಗಳ ಆಶೀರ್ವಾದ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮುಂದುವರೆಯಲಿದೆ. ರಾಜಕೀಯ ರಹಿತ ರಾಯಣ್ಣ ಬ್ರಿಗೇಡ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದರು.
 
ಹಿಂದೂ ಮಠಮಾನ್ಯ ಹಾಗೂ ಸ್ವಾಮೀಜಿಗಳನ್ನು ಟೀಕಿಸುವುದು ಫ್ಯಾಶನ್ ಆಗುತ್ತಿದೆ. ವಕ್ಫ್ ಬೋರ್ಡ್‌ನಲ್ಲಿ 50 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ವಕ್ಫ್ ಬೋರ್ಡ್‌ನ್ನು ಪ್ರಶ್ನೆ ಮಾಡಲು ರಾಜ್ಯ ಸರಕಾರಕ್ಕೆ ತಾಕತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. 
 
ಏಡಪಂಥೀಯ ಕೆಲವರು ಷಡ್ಯಂತ್ರ ರೂಪಿಸಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಮಠಕ್ಕೆ ಮುತ್ತಿಗೆ ಹಾಕಿದರೇ ರಾಜ್ಯಾದ್ಯಂತ ಧರಣಿ ಕೈಗೊಳ್ಳುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಸ್ ಪೋರ್ಟ್ ಬೇಕಾ, ಮೊದ್ಲು ಟಾಯ್ಲೆಟ್ ಕಟ್ಸಿ...!