Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಗಾಯಗೊಂಡ ಹೆಬ್ಬುಲಿಯಂತೆ: ತೇಜಸ್ವಿನಿ ರಮೇಶ್

ಯಡಿಯೂರಪ್ಪ ಗಾಯಗೊಂಡ ಹೆಬ್ಬುಲಿಯಂತೆ: ತೇಜಸ್ವಿನಿ ರಮೇಶ್
ಬೆಂಗಳೂರು , ಸೋಮವಾರ, 17 ಏಪ್ರಿಲ್ 2017 (15:05 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಾಯಗೊಂಡ ಹೆಬ್ಬುಲಿಯಂತೆ ಎಂದು ಮಾಜಿ ಸಂಸದೆ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಹೇಳಿದ್ದಾರೆ.
 
ಗುಂಡ್ಲುಪೇಟೆಯಲ್ಲಿ ಆಯೋಜಿಸಲಾದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಭಯದಿಂದ ಸಿದ್ದರಾಮಯ್ಯನವರ ಸಂಪೂರ್ಣ ಸರಕಾರವೇ ಗುಂಡ್ಲುಪೇಟೆಗೆ ಶಿಫ್ಟ್ ಆಗಿತ್ತು, ಹಣ ಬಲ, ಅಧಿಕಾರ ಬಲದಿಂದ ಚುನಾವಣೆ ಗೆದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಸಿದ್ದರಾಮಯ್ಯನವರೇ ಯಡಿಯೂರಪ್ಪ ಕಂಡರೆ ಯಾಕೆ ಅಷ್ಟು ಭಯಪಡುತ್ತೀರಿ? ಯಡಿಯೂರಪ್ಪ ಹುಲಿ ಇದ್ದ ಹಾಗೆ ಎದೆಗುಂದುವ ನಾಯಕರಲ್ಲ ಎಂದು ವಾಗ್ದಾಳಿ ನಡೆಸಿದರು.
 
ಇಂಧನ ಸಚಿವ ಡಿ.ಕೆ.ಶಿವಕುಮಾರ್ ನನ್ನ ಬೆನ್ನಿಗೆ ಚೂರಿಹಾಕಿದವರು. ಗುಂಡ್ಲುಪೇಟೆಯ ಉಪಚುನಾವಣೆಯಲ್ಲಿ ಶಿವಕುಮಾರ್ ಗೆದ್ದಿರಬಹುದು. ಆದರೆ, ದೆಹಲಿಯ ಹೈಕಮಾಂಡ್ ಮುಂದೆ ಇವರ ಆಟ ನಡೆಯೋದಿಲ್ಲ ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಕಿಡಿಕಾರಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಸಚಿವ ಪಾಟೀಲ್