Webdunia - Bharat's app for daily news and videos

Install App

ಯಡಿಯೂರಪ್ಪ ಈ ವಯಸ್ಸಿನಲ್ಲಿ ಬಸ್‍ಸ್ಟ್ಯಾಂಡ್ ಲವ್‍ ಗೆ ಕೈ ಹಾಕಿದ್ದಾರೆ- ಸಿ.ಎಂ.ಇಬ್ರಾಹಿಂ ಲೇವಡಿ

Webdunia
ಗುರುವಾರ, 17 ಜನವರಿ 2019 (07:20 IST)
ಬೆಂಗಳೂರು : ಮದುವೆಯಾದ ಹುಡುಗಿಯಿಂದ ವಿಚ್ಚೇದನ ಕೊಡಿಸಿ ಮತ್ತೊಮ್ಮೆ ತಾಳಿ ಕಟ್ಟುವುದು ಕಷ್ಟದ ವಿಷಯ. ಕಾಂಗ್ರೆಸ್‍ನವರಿಗೆ ಈಗಾಗಲೇ ಮದುವೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೆ ಕಾಂಗ್ರೆಸ್‍ನ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದ್ದಾರೆ.


ಕುಮಾರಕೃಪ ಅತಿಥಿ ಗೃಹದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ' ಬಿಜೆಪಿಯವರು ಕಾಂಗ್ರೆಸ್ ಮನೆಗೆ ಕೈ ಹಾಕದೇ ಇದ್ದಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಯಾರೇ ಆದರೂ ಪಕ್ಕದ ಮನೆಗೆ ಕೈ ಹಾಕಿದಾಗ, ಪಕ್ಕದ ಮನೆಯವರು ಇವರ ಮನೆಗೆ ಕೈ ಹಾಕುವುದು ಸಾಮಾನ್ಯ. ಇಂತಹ ವಾತಾವರಣದಿಂದ ಬಿಜೆಪಿ 104 ಮಂದಿಯನ್ನು ರೆಸಾರ್ಟ್‍ನಲ್ಲಿ ಕೂಡಿ ಹಾಕುವ ದುರ್ಗತಿಗೆ ತಲುಪಿದೆ’ ಎಂದು ಟಾಂಗ್  ನೀಡಿದ್ದಾರೆ.


ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಐದು ತಿಂಗಳು ಕಳೆದಿಲ್ಲ. ಯಡಿಯೂರಪ್ಪ ಕೂಡ ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ವಿಪಕ್ಷ ನಾಯಕರಾಗಿ ಕುಮಾರಸ್ವಾಮಿ ಅವರ ಬೆನ್ನು ತಟ್ಟಿ ಆಡಳಿತಾತ್ಮಕ ವಿಷಯಗಳತ್ತ ಗಮನ ಹರಿಸಿ ಎಂದು ಸಲಹೆ ನೀಡಬೇಕಿತ್ತು.ಅದನ್ನು ಬಿಟ್ಟು ಈ ವಯಸ್ಸಿನಲ್ಲಿ ಬಸ್‍ಸ್ಟ್ಯಾಂಡ್ ಲವ್‍ಗೆ ಕೈ ಹಾಕಿದ್ದಾರೆ. ಮದುವೆಯಾದ ಹುಡುಗಿಯಿಂದ ವಿಚ್ಚೇದನ ಕೊಡಿಸಿ ಮತ್ತೊಮ್ಮೆ ತಾಳಿ ಕಟ್ಟುವುದು ಕಷ್ಟದ ವಿಷಯ. ಕಾಂಗ್ರೆಸ್‍ನವರಿಗೆ ಈಗಾಗಲೇ ಮದುವೆಯಾಗಿದೆ ಎಂದು ಸಿ.ಎಂ.ಇಬ್ರಾಹಿಂ ಯಡಿಯೂರಪ್ಪವವರ ಕಾಲೆಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments