ಕಳೆದ 2103ರಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಲೆಹರ್ಸಿಂಗ್ ಅವರ ಮನೆಯಲ್ಲಿ ಐಟಿ ದಾಳಿ ನಡೆದಾಗ ದೊರೆತ ಡೈರಿಯಲ್ಲಿ ಯಡಿಯೂರಪ್ಪಗೆ 69 ಕೋಟಿ ನೀಡಿರುವ ಬಗ್ಗೆ ಉಲ್ಲೇಖವಾಗಿತ್ತು. ಈ ಬಗ್ಗೆ ಬಿಜೆಪಿ ನಾಯಕರು ಉತ್ತರಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲ್ ಹಾಕಿದ್ದಾರೆ.
ನಗರದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ಸಾಚಾರಂತೆ ವರ್ತಿಸುತ್ತಿದ್ದಾರೆ. ತಾಕತ್ತಿದ್ರೆ ಲೆಹರ್ಸಿಂಗ್ ಡೈರಿಯ ಬಗ್ಗೆ ಉತ್ತರ ನೀಡಲಿ ಎಂದು ಗುಡುಗಿದರು.
ಇದೀಗ ಬಿಜೆಪಿ ಬಣ್ಣ ಬಯಲಾಗಿದೆ. ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಲೆಹರ್ಸಿಂಗ್ ಡೈರಿ ಬಹಿರಂಗಗೊಂಡಿದ್ದು 391 ಕೋಟಿ ರೂ ಕಪ್ಪ ಸ್ವೀಕರಿಸಿರುವುದು ಬಹಿರಂಗವಾಗಿದೆ ಎಂದು ಆರೋಪಿಸಿದರು
ಯಡಿಯೂರಪ್ಪ ಮಾಲೀಕತ್ವದ ಪ್ರೇರಣಾ ಸಂಸ್ಥೆಗೆ ಕೂಡಾ ಕಿಕ್ ಬ್ಯಾಕ್ ಕಪ್ಪ ಹಣ ಸಂದಾಯವಾಗಿರುವುದರ ಬಗ್ಗೆ ತನಿಖೆ ನಡೆಸಲು ಬಿಜೆಪಿ ಸಿದ್ದವಿದೆಯೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.