Webdunia - Bharat's app for daily news and videos

Install App

‘ತಾಕತ್ತಿದ್ದರೆ ಡಿಕೆಶಿ ಜೊತೆ ಯಾತ್ರೆ ಮಾಡಿ’

Webdunia
ಗುರುವಾರ, 13 ಅಕ್ಟೋಬರ್ 2022 (16:09 IST)
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕರ್ನಾಟಕ BJP ಟ್ವೀಟ್​​​ ಮಾಡಿ ಲೇವಡಿ ಮಾಡಿದೆ. ಮಾನ್ಯ ಸಿದ್ದರಾಮಯ್ಯರೇ ಜೋಡೊ ಎಂದರೆ ಕನ್ನಡದಲ್ಲಿ ಕೂಡುವುದು ಎಂದರ್ಥ. ನಿಮಗೆ ಒಂದಾಗಿರುವುದೇ ಗೊತ್ತಿಲ್ಲದ ಮೇಲೆ ಜೋಡೊ ಎಂದು ಏಕೆ ಆ ಹುಡುಗನನ್ನು ಕರೆದುಕೊಂಡು ಓಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದೆ. ಬುರುಡೆರಾಮಯ್ಯ ಎಂಬ ಹ್ಯಾಶ್​​ ಟ್ಯಾಗ್​​ನೊಂದಿಗೆ ಟ್ವೀಟ್​​ ಮಾಡಿರುವ ಬಿಜೆಪಿ, ನಮ್ಮ ಮುಖ್ಯಮಂತ್ರಿಗಳ ಧೈರ್ಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರೇ, ನಿಮಗೆ ತಾಕತ್ತಿದ್ದರೆ KPCC ಅಧ್ಯಕ್ಷ DK ಶಿವಕುಮಾರ್​​​ ಅವರ ಜೊತೆ ಯಾತ್ರೆ ಮಾಡಿ. ನಿಮಗೆ ಧಮ್ ಇದ್ದರೆ KPCC ಅಧ್ಯಕ್ಷರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂಬುದಾಗಿ ಹೇಳಿ ಎಂದು ಲೇವಡಿ ಮಾಡಿದೆ. ಸಿಎಂ ಆಗುವ ಆಸೆಯಿಂದ ಆ ಸಣ್ಣ ಹುಡುಗನ ಮಾತು ಕೇಳಿಕೊಂಡು ಸಿದ್ದರಾಮಯ್ಯ ರಸ್ತೆಯಲ್ಲಿ ಓಡುವುದು, ಬಸ್ಕಿ ಹೊಡೆಯುವುದು ನೋಡಿದಾಗಲೆಲ್ಲ ಅಯ್ಯೋ ಪಾಪ ಅನಿಸುತ್ತದೆ. ಬಿಜೆಪಿಯಲ್ಲಿ ಎಲ್ಲರೂ ಒಂದಾಗಿ ಯಾತ್ರೆ ಮಾಡುತ್ತಿರುವುದನ್ನು ನೋಡಿ ಬೀದಿ ಜಗಳವಾಡುವ ಕಾಂಗ್ರೆಸ್ ಪಕ್ಷಕ್ಕೆ ನಡುಕವುಂಟಾಗಿದೆ‌ಯೇ ಎಂದು ಪ್ರಶ್ನಿಸಿ ಅಪಹಾಸ್ಯ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್, ಇರಾನ್ ಯುದ್ಧ ಆದ್ರೆ ಟೆನ್ಷನ್ ಪಾಕಿಸ್ತಾನಕ್ಕೆ: ಯಾಕೆ ಗೊತ್ತಾ

ಅಹಮದಾಬಾದ್ ವಿಮಾನ ಪತನ: ಸಾವಿನ ಸಂಖ್ಯೆ 274 ಕ್ಕೆ ಏರಿಕೆ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

Karnataka Weather: ಜೂನ್ 16 ರವರೆಗೂ ಈ ಜಿಲ್ಲೆಗಳ ಹವಾಮಾನ ತಪ್ಪದೇ ಗಮನಿಸಿ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಮುಂದಿನ ಸುದ್ದಿ
Show comments