Select Your Language

Notifications

webdunia
webdunia
webdunia
webdunia

ರಂಗಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಯಕ್ಷಗಾನ ಕಲಾವಿದ ಗಂಗಯ್ಯ ಶೆಟ್ಟಿ

ರಂಗಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಯಕ್ಷಗಾನ ಕಲಾವಿದ ಗಂಗಯ್ಯ ಶೆಟ್ಟಿ
ಮಂಗಳೂರು , ಗುರುವಾರ, 23 ಮಾರ್ಚ್ 2017 (13:28 IST)
ಮಂಗಳೂರು: ಒಬ್ಬ ಕಲಾವಿದನಿಗೆ ಇದಕ್ಕಿಂತ ಹೆಚ್ಚಿನ ಸಾರ್ಥಕತೆ ಇನ್ನೇನಿದೆ? ಖ್ಯಾತ ಯಕ್ಷಗಾನ ಕಲಾವಿದ ಗಂಗಯ್ಯ ಶೆಟ್ಟಿ ರಂಗಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

 

ಕಟೀಲು ಮೇಳದ ಕಲಾವಿದ ಗಂಗಯ್ಯ ಶೆಟ್ಟಿ ಕಟೀಲು ಬಳಿಯ ಎಕ್ಕಾರಿನಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆಯೇ ಸಾವನ್ನಪ್ಪಿದ್ದಾರೆ. ಅರುಣಾಸುರ ಪಾತ್ರ ಧರಿಸಿದ್ದ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಕುಣಿಯುತ್ತಲೇ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಬದುಕಿಸಲಾಗಲಿಲ್ಲ.

 
ಸುಮಾರು 40 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಖ್ಯಾತ ಕಲಾವಿದ ಮಹಿಷಾಸುರ ಪಾತ್ರಧಾರಿಯಾಗಿ ಮಿಂಚಿದ್ದವರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಇತ್ತೀಚೆಗೆ ದೇಹಕ್ಕೆ ಭಾರವೆನಿಸುವ ವೇಷ ಧರಿಸುವ ಪಾತ್ರ ಮಾಡುತ್ತಿರಲಿಲ್ಲ.  

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಿಷಯ ಪ್ರಸ್ತಾಪಿಸಿದ ಖರ್ಗೆ