Webdunia - Bharat's app for daily news and videos

Install App

ಆಯುಧ ಪೂಜೆ ದಿನ ಮೈಸೂರು ರಾಜವಂಶಕ್ಕೆ ಗುಡ್ ನ್ಯೂಸ್: ಎರಡನೇ ಮಗುವಿಗೆ ತಂದೆಯಾದ ಯದುವೀರ್ ಒಡೆಯರ್

Krishnaveni K
ಶುಕ್ರವಾರ, 11 ಅಕ್ಟೋಬರ್ 2024 (12:10 IST)
ಮೈಸೂರು: ಆಯುಧ ಪೂಜೆ ದಿನದಂದೇ ಮೈಸೂರು ಯದುವಂಶಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ರಾಜವಂಶಸ್ಥ ಯದುವೀರ್ ಒಡೆಯರ್-ತ್ರಿಷಿಕಾ ಕುಮಾರಿ ಒಡೆಯರ್ ದಂಪತಿಗೆ ಎರಡನೇ ಗಂಡು ಮಗುವಾಗಿದೆ.

ಮೊನ್ನೆಯಷ್ಟೇ ದಸರಾ ಆಚರಣೆ ಸಂದರ್ಭದಲ್ಲಿ ಯದುವೀರ್ ಪತ್ನಿ ರಾಣಿ ತ್ರಿಷಿಕಾ ಉಬ್ಬು ಹೊಟ್ಟೆಯನ್ನು ಮರೆ ಮಾಚುತ್ತಿದ್ದುದು ಎಲ್ಲರ ಕಣ್ಣಿಗೆ ಬಿದ್ದಿತ್ತು. ಇದೀಗ ದಸರಾ ಸಂದರ್ಭದಲ್ಲೇ ಮೈಸೂರು ರಾಜವಂಶಕ್ಕೆ ಮತ್ತೊಬ್ಬ ಕುಡಿಯ ಆಗಮನವಾಗಿರುವುದು ವಿಶೇಷವಾಗಿದೆ.

ಅದೂ ಕ್ಷತ್ರಿಯ ವಂಶಕ್ಕೆ ಆಯುಧ ಪೂಜೆ ದಿನದಂದೇ ಗಂಡು ಮಗುವಿನ ಆಗಮನವಾಗಿರುವುದು ವಿಶೇಷ. ಯದುವೀರ್ ದಂಪತಿಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಇದೀಗ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಎರಡನೇ ಮಗುವಿಗೆ ಜನ್ಮ ನೀಡಿರುವ ಸಿಹಿ ಸುದ್ದಿ ಸಿಕ್ಕಿದೆ.

ಯದುವಂಶಕ್ಕೆ ಇನ್ನೊಂದು ಕುಡಿಯ ಆಗಮನವಾಗಿರುವುದರಿಂದ ದಸರಾ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಮೈಸೂರು ರಾಜವಂಶಕ್ಕೆ ಅಲಮೇಲಮ್ಮನ ಶಾಪದಿಂದಾಗಿ ಸಂತಾನ ಇಲ್ಲದೇ ಇತ್ತು. ಆದರೆ ಈಗ ದತ್ತುಪುತ್ರ ಯದುವೀರ್ ಗೆ ಇಬ್ಬರು ಮಕ್ಕಳಾಗಿದ್ದು, ಅಲಮೇಲಮ್ಮನ ಶಾಪ ಕೊನೆಯಾಯಿತು ಎಂದೇ ಹೇಳಬಹುದು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ