Select Your Language

Notifications

webdunia
webdunia
webdunia
webdunia

ಮನೆ ಬಿಟ್ಟು ಹೊರಗೆ ಬಂದವರಿಗೆ ಪೊಲೀಸರಿಂದ ಪೂಜೆ

ಮನೆ ಬಿಟ್ಟು ಹೊರಗೆ ಬಂದವರಿಗೆ ಪೊಲೀಸರಿಂದ ಪೂಜೆ
ವಿಜಯಪುರ , ಸೋಮವಾರ, 30 ಮಾರ್ಚ್ 2020 (17:15 IST)
ಮಹಾಮಾರಿ ಕೊರೊನಾ ವೈರಸ್ ಗೆ ಜಗತ್ತಿನ ಬಲಾಢ್ಯ ದೇಶಗಳೇ ಮಖಾಡೆ ಮಲಗುತ್ತಿವೆ. ಇಂಥದ್ರಲ್ಲಿ ಮನೆಯಲ್ಲಿ ಇರ್ರಪ್ಪಾ ಅಂತ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದ್ರೂ ಜನ ಮಾತ್ರ ಮನೆಯಿಂದ ಹೊರ ಬರುತ್ತಲೇ ಇದ್ದಾರೆ.

ಅನಗತ್ಯವಾಗಿ ಮನೆಯಿಂದ ಹೊರ ಬಂದ ಜನರಿಗೆ ಲಾಠಿ ರುಚಿ ತೋರಿಸಿದರೂ ಬುದ್ದಿ ಕಲಿಯದ ಕಾರಣದಿಂದಾಗಿ ವಿಜಯಪುರ ಪೊಲೀಸರು ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ.

ಮಾಸ್ಕ್ ಹಾಕಿಕೊಳ್ಳದೇ ಹಾಗೂ ಬೇಕಾಬಿಟ್ಟಿಯಾಗಿ ವಿನಾಕಾರಣ ತಿರುಗಾಡುವವರನ್ನು ಹಿಡಿದು ಪೂಜೆ ಮಾಡುತ್ತಿದ್ದಾರೆ.
ಜನರ ಹಣೆಗೆ ವಿಭೂತಿ, ತಿಲಕ ಇಟ್ಟು, ಊದಬತ್ತಿ ಬೆಳಗಿ ಪೊಲೀಸರೇ ಪೂಜೆ ಮಾಡುತ್ತಿದ್ದಾರೆ. ಪೊಲೀಸರ ಕ್ರಮಕ್ಕೆ ಪ್ರಜ್ಞಾವಂತರು ಖುಷ್ ಆಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಗೂ ಕುರಿಗೂ ಸಂಬಂಧ?: ಸಿದ್ದರಾಮಯ್ಯ ಹೇಳಿದ್ದೇನು?