Select Your Language

Notifications

webdunia
webdunia
webdunia
webdunia

ಭ್ರೂಣ ಹತ್ಯೆ ವಿವಾದ: ಇಬ್ರಾಹಿಂ ಪುತ್ರಿಗೆ ಮಹಿಳಾ ಆಯೋಗ ಭರವಸೆ

ಭ್ರೂಣ ಹತ್ಯೆ ವಿವಾದ: ಇಬ್ರಾಹಿಂ ಪುತ್ರಿಗೆ ಮಹಿಳಾ ಆಯೋಗ ಭರವಸೆ
ಬೆಂಗಳೂರು , ಮಂಗಳವಾರ, 3 ಜನವರಿ 2017 (17:36 IST)
ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ ಇಬ್ರಾಹಿಂ ಕುಟುಂಬದ ಮೇಲೆ ಮೇಲೆ ಭ್ರೂಣ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದರು, ಅದು ತಪ್ಪೇ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭರವಸೆ ನೀಡಿದ್ದಾರೆ. 
ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗಕ್ಕೆ ದೂರು ನೀಡಿದರೆ ದೂರು ಸ್ವೀಕರಿಸುತ್ತೇವೆ. ಇಲ್ಲದಿದ್ದರೆ, ನಾವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದರು. 
 
ಇಬ್ರಾಹಿಂ ಪುತ್ರಿ ಇಫಾ ಮತ್ತು ಅವರ ತಮ್ಮನ ಪುತ್ರ ಸಿ.ಎಂ. ಫೈಸಲ್ ಏಳು ತಿಂಗಳ ಹಿಂದೆ  ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆಗೆ ಇಬ್ರಾಹಿಂ ಕುಟುಂಬ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಇಫಾ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ನಿನ್ನನ್ನು ನೋಡಬೇಕು ಅನ್ನಿಸುತ್ತದೆ ಎಂದು ಹೇಳಿ ಖಾದರ್ ಪತ್ನಿ ಕಳೆದ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಆಕೆಯನ್ನು ಮನೆಗೆ ಕರೆಸಿಕೊಂಡಿದ್ದರು. ಮೊನ್ನೆ ಆಕೆಯ ಪತಿ ತವರುಮನೆಗೆ ಬಿಡಲು ಬಂದಾಗ ಆತನ ಮೇಲೆ ಹಲ್ಲೆ ಕೂಡ ನಡೆದಿತ್ತು.
 
ನಿನ್ನೆ ಮುಂಜಾನೆ ಇಫಾಗೆ ಆಕೆಯ ತಾಯಿ ಹಣ್ಣಿನ ಜ್ಯೂಸ್ ನೀಡಿದ್ದರು. ಬಳಿಕ ಆಕೆಗೆ ಹೊಟ್ಟೆ ನೋವು ಕಂಡುಬಂದಿತ್ತು. ಆಕೆ ಪತಿಗೆ ಫೋನ್ ಕರೆ ಮಾಡಿ ತಕ್ಷಣ ಬರುವಂತೆ ಹೇಳಿದ್ದಾಳೆ. ಆತ ಮೈಸೂರಿನಿಂದ ಬೆಂಗಳೂರಿಗೆ ಬರುವಷ್ಟರಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹಣ ನೀಡಿ ಗರ್ಭಪಾತ ಮಾಡಿಸಿದ್ದಾರೆ ಎಂದು ಇಬ್ರಾಹಿಂ ಸೋದರ ಖಾದರ್ ಆರೋಪಿಸಿದ್ದಾರೆ. 
 
ನಮ್ಮ (ಪತಿಯ) ಕುಟುಂಬಕ್ಕೆ ಮಾಹಿತಿ ನೀಡದೆ ಸೊಸೆಯ ಗರ್ಭಪಾತ ಮಾಡಿಸಲಾಗಿದೆ. ಈ ಕುರಿತು ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಖಾದರ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಪುರದಲ್ಲಿ 5.7 ತೀವ್ರತೆಯ ಭೂಕಂಪ