Webdunia - Bharat's app for daily news and videos

Install App

ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾದ ಮಹಿಳೆ: ಪತಿ ಅರೆಸ್ಟ್

Webdunia
ಮಂಗಳವಾರ, 24 ಆಗಸ್ಟ್ 2021 (20:38 IST)
ಬೆಂಗಳೂರು: ಶೃತಿ (31) ಎನ್ನುವ ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಸೋಮವಾರ ತಡ ರಾತ್ರಿ ಬೆಳಕಿಗೆ ಬಂದಿತ್ತು. ನೇಣು ಬಿಗಿದುಕೊಂಡು ತನ್ನ  ಪ್ರಾಣ ತೆಗೆದುಕೊಂಡಿರುವ ಕಾರಣ ವರದಕ್ಷಿಣೆ ಕಿರುಕುಳ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದರು. ಪತಿ ಮಿಥುನ್ ರೆಡ್ಡಿಯನ್ನು ತಡ ರಾತ್ರಿ ವಶಕ್ಕೆ ಪಡೆದಿದ್ದ ರಾಮಮೂರ್ತಿ ನಗರ ಪೊಲೀಸರು ಹೆಚ್ಚಿನ ತನಿಖೆ ನೆಡೆಸಿ ಇದೀಗ ಬಂಧಿಸಿದ್ದಾರೆ.
 
2014ರಲ್ಲಿ ಮಿಥುನ್ ರೆಡ್ಡಿ ಜೊತೆ ಮದುವೆಯಾಗಿದ್ದ ಮಹಿಳೆ, ಆತ ಬ್ಯಾಡ್ಮಿಂಟನ್ ತರಬೇತುದಾರನಾಗಿದ್ದ. ಇತ್ತೀಚೆಗೆ ಕುಡಿತದ ಚಟ ಕೂಡ ಅಂಟಿಸಿಕೊಂಡಿದ್ದ ಮಿಥುನ್ ಹೆಂಡತಿಯ ಜೊತೆಗೆ ಪ್ರತಿ ದಿನ ವರದಕ್ಷಿಣೆ ತರುವಂತೆ ಜಗಳ ಮಾಡುತ್ತಿದ್ದ. ದಂಪತಿಗೆ ನಾಲ್ಕುವರೆ ವರ್ಷದ ಗಂಡು ಮಗು ಇದೆ. ಸೋಮವಾರ ತಡ ರಾತ್ರಿ ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಶೃತಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಆತ್ಮಹತ್ಯೆಗೆ ನಿಖರ ಕಾರಣ ಸಂಪೂರ್ಣ ತಿಳಿದು ಬಂದಿಲ್ಲವಾದರೂ ಮಿಥುನ್ ರೆಡ್ಡಿ ಕುಟುಂಬಸ್ಥರ ವಿರುದ್ಧ ಶೃತಿ ಕುಟುಂಬದವರು ಕಿರುಕುಳದ ಆರೋಪ ಕೂಡ ಹೊರಿಸಿದ್ದಾರೆ. ಶೃತಿಯ ಸಹೋದರನ ದೂರಿನ ಮೇರೆಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ. ಸದ್ಯ ಮಿಥುನ್ ರೆಡ್ಡಿ ಯನ್ನು ರಾಮಮೂರ್ತಿ ನಗರ ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಿ ಬಂಧಿಸಿದ್ದಾರೆ.
 
ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆ: 
 
ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ ಗೃಹಿಣಿ ಶೃತಿ ಏಳು ವರ್ಷದ ಹಿಂದೆ ಮಿಥುನ್ ನನ್ನು ವರಿಸಿದ್ದಳು. ವರದಕ್ಷಿಣೆ ನೀಡುವಂತೆ ಗಂಡ ಮಿಥುನ್, ಅತ್ತೆ ಭಾಗ್ಯ ಹಾಗೂ ಮಾವ ಕಿರುಕುಳ ಕೂಡ ಕೊಡುತ್ತಿದ್ದರು  ಎನ್ನಲಾಗುತ್ತಿದೆ.
 
ಸದ್ಯ ಪತಿ ಮನೆಯವರೇ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪ ಹೊರಿಸಿದ್ದಾರೆ. ಕೊಲೆ ಮಾಡಿ‌
ನೇಣು ಹಾಕಿದ್ದಾರೆಂದು ಆರೋಪಿಸುತ್ತಿರುವ ಶೃತಿ ಕುಟುಂಬಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಓತ್ತಾಯಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Good News: ಒಂದೇ ದಿನದಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರೀ ಇಳಿಕೆ

ಯೂಟ್ಯೂಬರ್ ವಿಡಿಯೋದಲ್ಲಿ ಸೆರೆಯಾಯಿತು ಸೋನಮ್ ಜತೆಗಿನ ರಾಜಾ ರಘುವಂಶಿ ಕೊನೆ ಕ್ಷಣದ ವಿಡಿಯೋ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ, ಕಾಂಗ್ರೆಸ್ ಹಿರಿಯ ನಾಯಕಿಗೆ ಆಗಿದ್ದೇನು

ಇಂದು ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಹಾರಾಟ ದಿಢೀರ್‌ ಕ್ಯಾನ್ಸಲ್‌, ಕಾರಣ ಇಲ್ಲಿದೆ

ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ವಿಶೇಷ ಅಧಿವೇಶನ ಕರೆಯಬೇಕು: ಸುನಿಲ್ ಕುಮಾರ್

ಮುಂದಿನ ಸುದ್ದಿ
Show comments