Webdunia - Bharat's app for daily news and videos

Install App

ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಮುಖ ಕುಯ್ದು ಹಲ್ಲೆ

Webdunia
ಶುಕ್ರವಾರ, 11 ಆಗಸ್ಟ್ 2023 (18:00 IST)
ಮನೆ ಬಾಡಿಗೆ ಪಡೆದ್ಮೇಲೆ ಬಾಡಿಗೆ ಕಟ್ಟಲೇಬೇಕು. ಅಕಸ್ಮಾತ್ ಏನೋ ಕಷ್ಟ ಅಂದ್ರೆ ಹೋಗ್ಲಿ ಒಂದು ತಿಂಗಳು ಬಿಟ್ಟು ಕೊಡಿ ಅಂತ ಮಾಲೀಕ ಹೇಳ್ಬೋದು. ಆದ್ರೆ ಇಲ್ಲೊಬ್ಬ ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಅಂತಾನು ನೋಡದೆ ಚಾಕುವಿನಿಂದ ಮುಖವನ್ನೇ ಕೊಯ್ದಿದ್ದಾನೆ. ನ್ಯಾಯ ಕೊಡ್ಸಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೆ ರಕ್ಷಣೆ ಮಾಡಬೇಕಾದ ಪೊಲೀಸ್ರ ವಸೂಲಿಗಿಳಿದಿದ್ದಾರೆ.ಬೆಂಗಳೂರಿನಲ್ಲಿ ಬಾಡಿಗೆ ಕೇಳೋದೆ ತಪ್ಪಾ ಅನ್ಸತ್ತೆ. ಯಾಕಂದ್ರೆ ಮಹಿಳೆಯೊಬ್ಬರು ಬಾಡಿಗೆ ಕೇಳಿದ್ದಕ್ಕೆ ಆಕೆಯನ್ನ ಮುಖವನ್ನ ಹೇಗೆ ಕುಯ್ದಿದ್ದಾರೆ ನೋಡಿ. ಅಂದಹಾಗೆ ಈಕೆ ಹೆಸರು ಶ್ರೀದೇವಿ. ವಯಸ್ಸು 40 ವರ್ಷ. ಬೆಂಗಳೂರು ಬಂಡೆಪಾಳ್ಯ ಠಾಣಾ ವ್ಯಾಪ್ತಿಯ ನಿವಾಸಿ. ಕಳೆದ ಹಲವು ವರ್ಷಗಳಿಂದ ಈಕೆ ಫಯಾಜ್ ಎಂಬುವ ವ್ಯಕ್ತಿಗೆ ಸೇರಿದ್ದ ಬಿಲ್ಡಿಂಗ್ ವಾಸವಾಗಿರ್ತಾರೆ. ಫಯಾಜ್ ವಿದೇಶದಲ್ಲಿದ್ದ ಕಾರಣ ಹಲವು ವರ್ಷಗಳಿಂದ ಶ್ರೀದೇವಿಯೆ ಬಿಲ್ಡಿಂಗ್ ನ 18 ಮನೆ ಬಾಡಿಗೆ ಪಡೆದು ಫಯಾಜ್ ಗೆ ನೀಡುತ್ತಿರುತ್ತಾರೆ.

ಇನ್ನೂ ಇದೇ ಬಿಲ್ಡಿಂಗ್ ನಲ್ಲಿ ನಜೀರ್ ಎಂಬಾತ ಸಹ ಬಾಡಿಗೆಗೆ ಇದ್ದು ಮೂರು ತಿಂಗಳಿಂದ ಬಾಡಿಗೆ ಕೊಟ್ಟಿರೋದಿಲ್ಲ. ಹೀಗಾಗಿ ಶ್ರೀದೇವಿ ಸ್ವಲ್ಪ ಗಟ್ಟಿಯಾಗೇ ಬಾಡಿಗೆ ಕೊಡುವಂತೆ ಕೇಳಿದ್ದಾರೆನ್ಯಾಯ್ಕೆ ರೊಚ್ಚಿಗೆದ್ದ ನಜೀರ್ ತನ್ನ ಮಗನಾದ ಸದ್ದಾಂ ಗೆ ವಿಚಾರ ತಿಳಿಸಿದ್ದಾನೆ. ಸ್ಥಳಕ್ಕೆ ಬಂದಿರುವ ಸದ್ದಾಂ ಶ್ರೀದೇವಿ ಮೇಲೆ ಜಗಳ ಮಾಡಿ ನಂತರ ಚಾಕುವಿನಿಂದ ಆಕೆಯ ಮುಖವನ್ನೇ ಕುಯ್ದಿದ್ದಾನೆಇನ್ನೂ ಹಲ್ಲೆಗೊಳಗಾದ ಮಹಿಳೆ ಕುಟುಂಬಸ್ಥರು ಬಂಡೆಪಾಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೆ ಅವರು ಮಾಡಿದ್ದು ವಸೂಲಿ ಕೆಲಸ. ದೂರು ಕೊಟ್ಥರೆ , ಕೋರ್ಟ್ ಗೆ ನಿಮ್ಮ ದೂರನ್ನ ಕಳುಹಿಸೋಕೆ ಹಾಗೂ ಜೆರಾಕ್ಸ್ ಪ್ರತಿಗಳಿಗೆ 6 ಸಾವಿರ ದುಡ್ಡು ಬೇಕು ಅಂತ ವಸೂಲಿ ಮಾಡೋಕೆ ಇಳಿದಿದ್ದಾರೆ. ಹೋಗ್ಲಿ ದೂರಾದ್ರು ಸರಿಯಾಗಿ ತಗೊಂಡ್ರಾ ಅಂದ್ರೆ ಅದು ಇಲ್ಲ. 307 ದಾಖಲಿಸಬೇಕಾದ ಪ್ರಕರಣದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಬೇಕಾದ ರೀತಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳಿಗೆ ಸಹಕರಿಸಿದ್ದಾರೆ ಅಂತ ಶ್ರೀದೇವಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಮಳೆಯಿಂದ ಸಾಕು ಸಾಕಾಗಿದ್ದರೆ ಈ ಅಪ್ ಡೇಟ್ ಗಮನಿಸಿ

Chinnaswamy Stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಿಎಂ ನಿಖರ ಮಾಹಿತಿ

Chinnaswamy Stampede: ಸ್ಥಳದಲ್ಲಿದ್ದವರು ಪ್ರಾಣ ಉಳಿಸಲು ಯತ್ನಿಸಿದರು: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣವೇನು video

Animal Attack: MPಯ ಬರ್ವಾನಿಯಲ್ಲಿ 6ಮಂದಿ ಸಾವು, ಹಲವರಿಗೆ ಗಾಯ

Pakistan: ಗನ್‌ ಜತೆ 200 ಕೈದಿಗಳು ಪರಾರಿ, ಜೈಲಿನಲ್ಲೇ ಹೀಗಾದ್ರೇ ಇನ್ನೇನ್ ಕತೆ

ಮುಂದಿನ ಸುದ್ದಿ
Show comments