Webdunia - Bharat's app for daily news and videos

Install App

ದಂಪತಿಯ ಸರಸದಿಂದ ಬೇಸತ್ತು ನೆರೆ ಮನೆಯ ಮಹಿಳೆಯಿಂದ ದೂರು ದಾಖಲು

Krishnaveni K
ಬುಧವಾರ, 20 ಮಾರ್ಚ್ 2024 (10:30 IST)
ಬೆಂಗಳೂರು: ಪಕ್ಕದ ಮನೆಯ ದಂಪತಿಯ ಸರಸ ಸಲ್ಲಾಪದಿಂದ ಬೇಸತ್ತ ನೆರೆಮನೆಯ ಮಹಿಳೆ ಕೊನೆಗೆ ಪೊಲೀಸರಿಗೆ ದೂರು ನೀಡಿದ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.

ಪಕ್ಕದ ಮನೆಯ ದಂಪತಿಯ ಸರಸ ಸಲ್ಲಾಪದಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಮಹಿಳೆ ದೂರು ನೀಡಿದ್ದಾಳೆ. ಇದರ ಹಿಂದೆ ಅಷ್ಟೇ ದೊಡ್ಡ ಕತೆಯಿದೆ. ಆವಲಹಳ್ಳಿ ಬಿಡಿಎ ಲೇಔಟ್ ನಿವಾಸಿಯಾಗಿರುವ ಮಹಿಳೆ ತನ್ನ ಮನೆಯ ಪಕ್ಕದಲ್ಲೇ ಇರುವ ದಂಪತಿ ವಿರುದ್ಧ ದೂರು ನೀಡಿದ್ದಾರೆ.

ತಮ್ಮ ಮನೆಯ ಬಾಗಿಲಿನ ಪಕ್ಕವೇ ಪಕ್ಕದ ಮನೆಯ ಬೆಡ್ ರೂಂ ಇದೆ. ಆ ದಂಪತಿ ಕಿಟಿಕಿ, ಬಾಗಿಲು ತೆರೆದು ಸದಾ ಸರಸ ಸಲ್ಲಾಪದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇದರಿಂದ ಅಸಹ್ಯವಾಗುತ್ತಿದೆ. ಮುಜುಗರಕ್ಕೊಳಗಾದ ಮಹಿಳೆ ಬೆಡ್ ರೂಂ ಕಿಟಿಕಿ ಬಾಗಿಲು ಮುಚ್ಚುವಂತೆ ಹೇಳಿದರೂ ಅವರು ಕೇಳಿಲ್ಲ.

ಬದಲಾಗಿ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ, ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ತಮ್ಮ ಕೆಲವು ಪರಿಚಯದ ಯುವಕರನ್ನು ಕರೆಸಿ ಬೆದರಿಕೆ ಹಾಕಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡಿ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments