ಕುಡಿದ ಮತ್ತಲ್ಲಿ ಕಾರು ಚಲಾಯಿಸುತ್ತ ಪರಷ್ಪರ ಮುತ್ತು ಕೊಡಲು ಹೋದ ಯುವತಿಯರಿಬ್ಬರು ಸರಣಿ ಅಪಘಾತಕ್ಕೆ ಕಾರಣವಾದ ಘಟನೆ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕಾರ್ನಿಂದ ಗುದ್ದಿಸಿಕೊಂಡ ಕ್ಯಾಬ್ ಮತ್ತು ಬೈಕ್ ಚಾಲಕರು ನೀಡಿರುವ ಹೇಳಿಕೆಯ ಪ್ರಕಾರ ಕಾರ್ ಚಲಾಯಿಸುತ್ತಿದ್ದ ಯುವತಿ ತನ್ನ ಪಕ್ಕದಲ್ಲಿ ಕುಳಿತಿದ್ದ ಯುವತಿಗೆ ಕಿಸ್ ಕೊಡುವ ಭರದಲ್ಲಿ ಸರಣಿ ಅಪಘಾತಕ್ಕೆ ಕಾರಣಳಾಗಿದ್ದಾಳೆ.
ಶಾಲಿನಿ ಎಂಬ ಯುವತಿ ತನ್ನಿಬ್ಬರು ಗೆಳತಿಯರೊಂದಿಗೆ ಭಾನುವಾರ ತಡರಾತ್ರಿ ಹೋಂಡಾ ಸಿಟಿ ಕಾರ್ನಲ್ಲಿ ಪ್ರಯಾಣಿಸುತ್ತಿದ್ದರು. ನಂದಿದುರ್ಗ ರಸ್ತೆಯಲ್ಲಿ ಕಾರ್ ಓಡುತ್ತಿದ್ದಾಗ ಆಕೆ ಸ್ವಿಫ್ಟ್ ಕಾರ್ ಮತ್ತು ಹೋಂಡಾ ಆ್ಯಕ್ಟಿವಾ ಬೈಕ್ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಪ್ರಯತ್ನಿಸಿದ್ದಾಳೆ.
ಅಪಘಾತಕ್ಕೊಳಕಾದ ಬೈಕ್ ಸವಾರ ಫರ್ಹಾನ್ ಮತ್ತು ಕ್ಯಾಬ್ ಚಾಲಕ ಶೇಖರ್ ರಾಮಚಂದ್ರ ಯುವತಿ ಕಾರ್ ಚೇಸ್ ಮಾಡಿ ಅಡ್ಡಗಟ್ಟಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಾಲಿನಿ ಸುಮಾರು 30 ವರ್ಷದ ಪ್ರಾಯದವಳಾಗಿದ್ದು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾಳೆ. ಪೊಲೀಸರು ನಡೆಸಿದ ಆಲ್ಕೋಹಾಲ್ ಪರೀಕ್ಷೆಯಲ್ಲಿ ಆಕೆ ಪಾನಮತ್ತಳಾಗಿಲ್ಲ ಎಂಬುದು ಸಾಬೀತಾಗಿದೆ.
ನನ್ನ ಕ್ಯಾಬ್ಗೆ ಆದ ಹಾನಿಗೆ ಹಣ ಸಂದಾಯ ಮಾಡುವಂತೆ ಕೇಳಿದೆ. ಆದರೆ ನಾನು ನಿಧಾನವಾಗಿ ಹೋಗುತ್ತಿದ್ದರಿಂದ ಅಪಘಾತವಾಗಿದೆ ಎಂದು ಆಕೆ ನನ್ನ ವಿರುದ್ಧವೇ ಕಿಡಿಕಾರಿದಳು. ಅಪಘಾತ ಮಾಡಿದ ಮಹಿಳೆ ಕಾರ್ನಿಂದ ಇಳಿದು ಏನಾಗಿದೆ ಕೇಳಲೂ ಇಲ್ಲ, ಕ್ಷಮೆಯಾಚಿಸಲು ಇಲ್ಲ. ಕಾರಿನಲ್ಲಿ ಮದ್ಯದ ಬಾಟಲಿಗಳು ಸಹ ಪತ್ತೆಯಾಗಿವೆ. ಆದರೆ ಬೋರಿಂಗ್ ಆಸ್ಪತ್ರೆ ವೈದ್ಯರು ತಪ್ಪು ವರದಿ ನೀಡಿದ್ದಾರೆ, ಎಂದು ಕ್ಯಾಬ್ ಚಾಲಕ 35 ವರ್ಷದ ಶೇಖರ್ ರಾಮಚಂದ್ರ ದೂರಿದ್ದಾರೆ.