Webdunia - Bharat's app for daily news and videos

Install App

ಪತ್ನಿಯರ ಹೊಡೆದಾಟ; ಪತಿ ಪರಾರಿ

Webdunia
ಶುಕ್ರವಾರ, 31 ಆಗಸ್ಟ್ 2018 (19:08 IST)
ಆಗಲೇ ಒಬ್ಬಾಕೆಯನ್ನ ಮದುವೆಯಾಗಿ ಎರಡು ಮಕ್ಕಳನ್ನ ಕರುಣಿಸಿ, ಮೊದಲನೇ ಹೆಂಡತಿಗೆ ಗೊತ್ತಾಗದಂತೆ ಇನ್ನೊಬ್ಬಳನ್ನ ಮದುವೆಯಾಗಿದ್ದಾನೆ. ಇನ್ನು ಎರಡನೇ ಮದುವೆ ವಿಚಾರ ಮೊದಲ ಹೆಂಡತಿಗೆ ಗೊತ್ತಾಗುತ್ತಿದ್ದಂತೆ ಆದ ಅವಾಂತರ ಅಸ್ಟಿಷ್ಟಲ್ಲ. 

ದಾವಣಗೆರೆ ಜಿಲ್ಲೆ ಹರಿಹರ ಸಮೀಪವಿರುವ ಕವಲೆತ್ತು ಗ್ರಾಮದಲ್ಲಿ ಮೊದಲ ಹಾಗೂ ಎರಡನೇ ಪತ್ನಿಯರಿಬ್ಬರು ಮಾರಾಮಾರಿ ಮಾಡಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷದ ಹಿಂದೆ ಹರಪನಹಳ್ಳಿ ತಾಲೂಕಿನ ಪುಣಬಘಟ್ಟ ಗ್ರಾಮದ ಭಾಗ್ಯ ಹಾಗೂ ವಸಂತ್ ಎಂಬುವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ವೇಳೆ ಸುಖ ಸಂಸಾರ ನಡೆಸುತ್ತಿದ್ದ ಇಬ್ಬರಿಗೆ ಎರಡು ಮಕ್ಕಳು ಸಹ ಆಗಿವೆ. ಆದ್ರೆ ಕಳೆದ 5 ವರ್ಷದ ಹಿಂದೆ ಮೊದಲ ಹೆಂಡತಿ ಭಾಗ್ಯಳನ್ನ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದ ವಸಂತ್, ನಂತರದಲ್ಲಿ ಭಾಗ್ಯಳನ್ನ ಭೇಟಿಯು ಸಹ ಆಗಿಲ್ಲ. ಈಗ ಕಳೆದ 3 ವರ್ಷದಿಂದ ಪತಿ ವಸಂತ್ ಇನ್ನೊಬ್ಬಾಕೆಯನ್ನ ಮದುವೆಯಾಗಿರುವುದು ಮೊದಲನೇ ಪತ್ನಿಗೆ ಭಾಗ್ಯಗೆ ಗೊತ್ತಾಗಿದೆ.

ವಿಷಯ ಗೊತ್ತಾಗುತ್ತಿದ್ದಂತೆ ಗಂಡನ ವಿಳಾಸ ತಿಳಿದು  ಗಂಡನ ಮನೆಗೆ ನುಗ್ಗಿ ಎರಡನೇ ಹೆಂಡತಿ ರೇಖಾ ಅವರಿಗೆ ಥಳಿಸಿದ್ದಾರೆ. ಇನ್ನು ಪತ್ನಿ ಮನೆಗೆ ಬರುವುದು ಗೊತ್ತಾಗುತ್ತಿದ್ದಂತೆ ಎರಡನೇ ಹೆಂಡತಿ ರೇಖಾ ಅವಳನ್ನ ಮನೆಯಲ್ಲೇ ಬಿಟ್ಟು ಗಂಡ ಅಲ್ಲಿಂದ ಪರಾರಿಯಾಗಿದ್ದಾನೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments