Select Your Language

Notifications

webdunia
webdunia
webdunia
webdunia

ಕುಡುಕ ಪತಿಯ ಕಾಟ ತಾಳದೆ ಕುತ್ತಿಗೆ ಕಚಕ್ ಎನ್ನಿಸಿದ ಪತ್ನಿ

ಕುಡುಕ ಪತಿಯ ಕಾಟ ತಾಳದೆ ಕುತ್ತಿಗೆ ಕಚಕ್ ಎನ್ನಿಸಿದ ಪತ್ನಿ
ಬಳ್ಳಾರಿ , ಗುರುವಾರ, 22 ಜೂನ್ 2017 (13:39 IST)
ಕುಡುಕ ಪತಿಯ ಪ್ರತಿನಿತ್ಯದ ಕಾಟದಿಂದ ಬೇಸತ್ತ ಪತ್ನಿ ಕೋಪದ ಭರದಲ್ಲಿ ಚಾಕುವಿನಿಂದ ಆತನ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
 
ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ತಾಲೂಕಿನ ನಿವಾಸಿಯಾದ ವೀರಸಂಗಪ್ಪ ಪ್ರತಿನಿತ್ಯ ಕುಡಿದು ಬಂದ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ನಡೆಸುವುದು ಆತನ ಕಾಯಕವಾಗಿತ್ತು.
 
ನಿನ್ನೆ ಕೂಡಾ ಪತಿ ಮನೆಯ ವೆಚ್ಚಕ್ಕೆ ಹಣ ನೀಡದೇ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡಿ, ಅಸಭ್ಯ ಪದಗಳಿಂದ ನಿಂದಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ ಆತನನ್ನು ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾಳೆ.
 
ಪತ್ನಿ ಕತ್ತಿಯಿಂದ ಇರಿದಿದ್ದರಿಂದ ಪತಿ ವೀರ ಸಂಗಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿ ಪತ್ನಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.    

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಡಾರ್ಜಿಲಿಂಗ್ ಹಿಂಸಾಚಾರ: ಕರ್ನಾಟಕ ಮೂಲದ ಯೋಧ ಹುತಾತ್ಮ