Select Your Language

Notifications

webdunia
webdunia
webdunia
webdunia

ಡಾರ್ಜಿಲಿಂಗ್ ಹಿಂಸಾಚಾರ: ಕರ್ನಾಟಕ ಮೂಲದ ಯೋಧ ಹುತಾತ್ಮ

ಡಾರ್ಜಿಲಿಂಗ್ ಹಿಂಸಾಚಾರ: ಕರ್ನಾಟಕ ಮೂಲದ ಯೋಧ ಹುತಾತ್ಮ
ಬೆಂಗಳೂರು , ಗುರುವಾರ, 22 ಜೂನ್ 2017 (13:32 IST)
ಚಿಕ್ಕಬಳ್ಳಾಪುರ:ಡಾರ್ಜಲಿಂಗ್‌ನಲ್ಲಿ ಪ್ರತ್ಯೇಕ ಗೋರ್ಖಾ ಲ್ಯಾಂಡ್‌ ನಿರ್ಮಾಣಕ್ಕೆ ಆಗ್ರಹಿಸಿ ಗೋರ್ಖಾ ಮುಕ್ತಿ ಮೋರ್ಚಾ ನಡೆಸುತ್ತಿರುವ ಹಿಂಸಾಚಾರದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಕರ್ನಾಟಕದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
 
ಶಿಡ್ಲಘಟ್ಟದ ಯಣ್ಣಂಗಾರುವಿನ ಯೋಧ ಗಂಗಾಧರ್‌ ಹುತಾತ್ಮ ಯೋಧನಾಗಿದ್ದು, ಕಳೆದ 20 ವರ್ಷಗಳಿಂದ ಬಿಎಸ್‌ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 
 
ಗಂಗಾಧರ್‌ಅವರು ಮುನಿಯಪ್ಪ, ಲಕ್ಷ್ಮಮ್ಮ ದಂಪತಿಯ ಪುತ್ರನಾಗಿದ್ದು, ಪತ್ನಿ ಶಿಲ್ಪಾ ಮತ್ತು 10 ವರ್ಷದ ಮಗನನ್ನು ಅಗಲಿದ್ದಾರೆ. ಇಂದು ಸಂಜೆ ಸ್ವಗ್ರಾಮಕ್ಕೆ ಅವರ ಪಾರ್ಥೀವ ಶರೀರ ಆಗಮಿಸುವ ಸಾಧ್ಯತೆಗಳಿವೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಸಾಲಮನ್ನಾ ಧರಣಿ ಮುಂದೂಡಿದ ಬಿಜೆಪಿ: ಇದು ವೆಂಕಯ್ಯನಾಯ್ಡು ಹೇಳಿಕೆ ಇಫೆಕ್ಟ್?