Select Your Language

Notifications

webdunia
webdunia
webdunia
webdunia

ಪ್ರಿಯಕರನ ಜತೆ ಸೇರಿ ಪತಿಯನ್ನೇ ಸುಟ್ಟಳು?

ಪ್ರಿಯಕರ
ನೆಲಮಂಗಲ , ಸೋಮವಾರ, 9 ಮೇ 2016 (11:44 IST)
ಸುಟ್ಟಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ಘಟನೆ ಬೆಳಕಿಗೆ ಬಂದಿದೆ. ಮೃತನನ್ನು  ದೊಡ್ಡಬಳ್ಳಾಪುರದ ಹಳೆಕೋಟೆ ಗ್ರಾಮದ ನಿವಾಸಿ ಹನುಮಯ್ಯ ಎಂದು ಗುರುತಿಸಲಾಗಿದ್ದು ನಿನ್ನೆ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದ ಪತ್ನಿ ಪುಷ್ಪಲತಾ ಅಲ್ಲಿಂದ ನಾಪತ್ತೆಯಾಗಿದ್ದಳು ಎಂದು ತಿಳಿದು ಬಂದಿದೆ.
 
ಕಳೆದ ವರ್ಷವಷ್ಟೇ  ಮದುವೆಯಾಗಿದ್ದ ಹನುಮಯ್ಯ- ಪುಷ್ಪಲತಾ ನೆಲಮಂಗಲದಲ್ಲಿ ವಾಸವಾಗಿದ್ದರು. ಮದುವೆಯಾದಾಗಿನಿಂದ ಅವರಿಬ್ಬರ ಸಂಬಂಧ ಸರಿ ಇರಲಿಲ್ಲ ಎಂದು ತಿಳಿದು ಬಂದಿದೆ. 
 
ತಮ್ಮ ಮಗನ ಸಾವಿಗೆ ಸೊಸೆಯೇ ಕಾರಣ. ಆಕೆಗೆ ಅನೈತಿಕ ಸಂಬಂಧವಿತ್ತು. ತನ್ನ ಅಣ್ಣ, ಪ್ರಿಯಕರನ ಜತೆ ಸೇರಿ ಆಕೆಯೇ ತಮ್ಮ ಮಗನಿಗೆ ಬೆಂಕಿ ಹಚ್ಚಿದ್ದಾಳೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. 

ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡಿದ ಬಾಲಕನಿಗೆ 10ನೇ ತರಗತಿಯಲ್ಲಿ ಶೇ. 95.8