Publish Date: Mon, 05 Aug 2019 (19:20 IST)
Updated Date: Mon, 05 Aug 2019 (19:22 IST)
ಬಾಳಿ ಬದುಕಬೇಕಿದ್ದ ಪ್ರೇಮಿಗಳು ನದಿಗೆ ಹಾರಿ ಪ್ರಾಣ ಕಳೆದುಕೊಂಡಿರೋ ಘಟನೆ ನಡೆದಿದೆ.
ಅವರಿಬ್ಬರೂ ಪ್ರೇಮ ಪಕ್ಷಿಗಳಾಗಿದ್ದರು. ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದರು. ಆ ಜೋಡಿಯ ಲವ್ ವಿಷ್ಯ ಮನೆ ಮಂದಿಗೆ ಗೊತ್ತಾಗಿದೆ. ಹೀಗಾಗಿ ವಯಸ್ಸಲ್ಲದ ವಯಸ್ಸಲ್ಲಿ ಲವ್ವು ಗಿವ್ವು ಮಾಡೋದು ಬೇಡ ಅಂತ ಹಿರಿಯರು ಹೇಳಿದ್ದಾರೆ.
ಆದರೆ ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಜೋಡಿಗಳು ಕಾವೇರಿ ನದಿಗೆ ಹಾರಿ ಜೀವ ಬಿಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸೀಪುರದ ಹೆಮ್ಮಿಗೆ ಹತ್ತಿರದಲ್ಲಿರೋ ಸೇತುವೆ ಯಲ್ಲಿ ಈ ಘಟನೆ ನಡೆದಿದೆ. ನಂಜನಗೂಡು ಕಾಮಹಳ್ಳಿಯ ಮನು (20) ಹಾಗೂ ಟಿ.ನರಸೀಪುರದ ಶ್ರೀರಾಂಪುರದ ದೀಪಶ್ರೀ (17) ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಶವವನ್ನು ನದಿಯಿಂದ ಹೊರತೆಗೆದಿದ್ದಾರೆ.