Webdunia - Bharat's app for daily news and videos

Install App

ಅಶೋಕ್ ಗೆ ಕೈ ತಪ್ಪಿದ್ದೇಕೆ ಅಧ್ಯಕ್ಷ ಸ್ಥಾನ

Webdunia
ಭಾನುವಾರ, 30 ಜುಲೈ 2023 (20:07 IST)
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿಬಂದಂತಿದೆ. ಒಕ್ಕಲಿಗ ನಾಯಕನಿಗೇ ಪಟ್ಟಕಟ್ಟಲು ಕೇಸರಿ ಹೈಕಮಾಂಡ್ ನಿರ್ಧರಿಸಿದ್ದು, ಸಂಘಟನೆಯ ಹಿನ್ನೆಲೆ ಹಿಂದುತ್ವದ ಅಜೆಂಡಾ ಇರುವ ಸಿಟಿ ರವಿ ಆಯ್ಕೆ ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಈ ಮಧ್ಯೆ ಮತ್ತೊಬ್ಬ ಪ್ರಬಲ ಒಕ್ಕಲಿಗ ನಾಯಕ ಸಾಮ್ರಾಟ್ ಅಶೋಕ್ ಗೆ ಚಾನ್ಸ್ ಮಿಸ್ಸಾಗಿರೋದ್ರ ಹಿಂದೆ ಸಾಕಷ್ಟು ಕಾರಣಗಳು ಕೇಳಿಬರ್ತಿವೆ .

ರಾಜ್ಯ ಬಿಜೆಪಿಯ ಸಾರಥಿ ಆಯ್ಕೆಗೆ ಕೇಸರಿ ಹೈಕಮಾಂಡ್ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದಂತೆ ಕಾಣ್ತಿದೆ. ಬಣ ರಾಜಕೀಯ, ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್, ಟಾಕ್ ವಾರ್ ಡ್ಯಾಮೇಜ್ ಗಳಿಂದ ಎಚ್ಚೆತ್ತ ಹೈಕಮಾಂಡ್ ಕೊನೆಗೂ ಲಗಾಮು ಹಾಕಲು ಮುಂದಾಗಿದೆ. ಪಕ್ಷದಲ್ಲಿ ಸಮನ್ವಯತೆ ಕಾಪಾಡಿ ಮುನ್ನಡೆಸಬೇಕಾದ ಸಾರಥಿ ಆಯ್ಕೆ ಇನ್ನೊಂದು ವಾರದೊಳಗೆ ಘೋಷಣೆಯಾಗಲಿದೆ. ಅಳೆದೂ ತೂಗಿ ಜಾತಿ ಸಮೀಕರಣದ ಆಧಾರದ ಮೇಲೆ ಒಕ್ಕಲಿಗ ಸಮುದಾಯದ ನಾಯಕನಿಗೆ ಪಟ್ಟ ಕಟ್ಟಲು ಕೇಸರಿ ಪಡೆ ಸಿದ್ದವಾಗಿದೆ. ಈ ಪೈಕಿ ರೇಸ್ ನಲ್ಲಿದ್ದ ಅಶೋಕ್, ಅಶ್ವಥ್ ನಾರಾಯಣ, ಸಿಟಿ ರವಿ, ಶೋಭಾ ಕರಂದ್ಲಾಜೆ  ಪೈಕಿ ಸಿಟಿ ರವಿ ಆಯ್ಕೆ ಬಹುತೇಕ ಪೈನಲ್ ಆಗಿದ್ದು ಘೋಷಣೆಯೊಂದೇ ಭಾಕಿ ಎನ್ನಲಾಗ್ತಿದೆ.

 ಮಾಜಿ ಡಿಸಿಎಂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಸಾಮ್ರಾಟ ಎಂದು ಕರೆಸಿಕೊಳ್ಳುವ ಆರ್.ಅಶೋಕ್ ಗೆ ರಾಜ್ಯಾಧ್ಯಕ್ಷ ಸ್ಥಾನ ಕೊನೆಯ ಕ್ಷಣದಲ್ಲಿ ಕೈತಪ್ಪಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ ಸೈ ಎನಿಸಿಕೊಂಡಿರುವ ಅಶೋಕ್ ಒಕ್ಕಲಿಗ ಸಮುದಾಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ರು ಹೈಕಮಾಂಡ್ ಮನಗೆಲ್ಲುವಲ್ಲಿ ಅಶೋಕ್ ವಿಫಲರಾಗಿದ್ದಾರೆ ಎನ್ನಲಾಗ್ತಿದೆ.

ಆರ್. ಅಶೋಕ್ ಗೆ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಲು ಕಾರಣವೇನು
 
>ಅಶೋಕ್ ಮೇಲೆ ಹೊಂದಾಣಿಕೆ ರಾಜಕಾರಣದ ಆರೋಪ
 
>ಬಿ.ಎಸ್ ಯಡಿಯೂರಪ್ಪ ಆಪ್ತನೆಂಬ ಪ್ರಬಲ ಕಾರಣ
 
>ಸಂಘಪರಿವಾರಕ್ಕೂ ಅಶೋಕ್ ಗೂ ದೂರಾ -ದೂರಾ
 
 > ಹಿಂದುತ್ವದ ಅಜೆಂಡಾ ಇಲ್ಲ, ಕಾರ್ಯಕರ್ತರ ಮನಗೆಲ್ಲುವಲ್ಲಿ ವಿಫಲ
 
> ಕಳೆದ ಚುನಾವಣೆಯಲ್ಲಿ ವರಿಷ್ಠರು ಕೊಟ್ಟ ಟಾಸ್ಕ್ ಕಂಪ್ಲೀಟ್ ಮಾಡುವಲ್ಲಿ ವಿಫಲ
 
> ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಪ್ರಬಲ ಪೈಪೋಟಿ ಕೊಡುವಲ್ಲಿ ಸೋತ ಸಾಮ್ರಾಟ್
 
> ಪದ್ಮನಾಭನಗರ ಕ್ಷೇತ್ರ ಬಿಟ್ಟು ಹಳೆ ಮೈಸೂರು ಭಾಗದಲ್ಲೂ ನಾಯಕತ್ವ ತೋರಿಸುವಲ್ಲಿ ವಿಫಲ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

E Tukaram: ಬಳ್ಳಾರಿ ಚುನಾವಣೆಗೆ ಬರೋಬ್ಬರಿ 21 ಕೋಟಿ ಹಣ ಬಳಕೆ: ಸಂಸದ ಇ ತುಕರಾಂ ಇಡಿ ವಶಕ್ಕೆ

Gold price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvamshi murder: ಗುಡ್ಡ ಹತ್ತಿ ಸುಸ್ತು ಎಂದಿದ್ದ ಹಂತಕರಿಗೆ ಸೋನಂ ನೀಡಿದ್ದ ಆಫರ್ ಏನು

Raj Raghuvamshi murder: ಸೋನಂಳನ್ನು ಅಕ್ಕ ಎನ್ನುತ್ತಿದ್ದ ಮರ್ಡರ್ ಆದ ದಿನವೂ ಊರಲ್ಲೇ ಇದ್ದ

Indore Raja Raghuvamshi murder: ವಿಮಾನ ನಿಲ್ದಾಣದಲ್ಲೇ ಆರೋಪಿ ರಾಜ್ ಕುಶ್ವಾಹ್ ಗೆ ಕಪಾಳ ಮೋಕ್ಷ ವಿಡಿಯೋ

ಮುಂದಿನ ಸುದ್ದಿ
Show comments