Webdunia - Bharat's app for daily news and videos

Install App

ಡಿಕೆಶಿಗೆ ಬೈ ಎಲೆಕ್ಷನ್ ಉಸ್ತುವಾರಿ ನೀಡಿದ್ದೇಕೆ? ಕೈ ಪಡೆಯ ಮಾಸ್ಟರ್ ಪ್ಲಾನ್ ಏನು?

Webdunia
ಸೋಮವಾರ, 13 ಮೇ 2019 (12:55 IST)
ಸಚಿವ ಡಿ.ಕೆ. ಶಿವಕುಮಾರ್ ಗೆ ಕುಂದಗೋಳ ಬೈ ಎಲೆಕ್ಷನ್  ಉಸ್ತುವಾರಿ ನೀಡಿದ್ದೇಕೆ ?  ಹೀಗೊಂದು ಪ್ರಶ್ನೆ ಸ್ವತಃ ಕಾಂಗ್ರೆಸ್ ಮುಖಂಡರಿಂದಲೂ ಆಂತರಿಕವಾಗಿ ಕೇಳಿಬರುತ್ತಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದಂತಾಗಿದೆ.

ಡಿಕೆಶಿಗೆ ಬೈ ಎಲೆಕ್ಷನ್ ಉಸ್ತುವಾರಿ ನೀಡಿದ್ದರ ಹಿಂದಿದೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಅಡಗಿದೆ. ಬೈ ಎಲೆಕ್ಷನ್ ಬಳಿಕ ಡಿಕೆ ಶಿವಕುಮಾರಗೆ ಹುಬ್ಬಳ್ಳಿ- ಧಾರವಾಡ ಉಸ್ತುವಾರಿ ನೀಡಲಾಗುತ್ತದಂತೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಡಿಕೆಶಿ ಒಲಿಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಧ್ಯ ಆರ್. ವಿ. ದೇಶಪಾಂಡೆ ಧಾರವಾಡ ಉಸ್ತುವಾರಿ ಸಚಿವರಾಗಿದ್ದಾರೆ. ಬೈ ಎಲೆಕ್ಷನ್ ಬಳಿಕ ಉಸ್ತುವಾರಿ ಯಾರಿಗೆ ನೀಡಬೇಕು ಅನ್ನೋ ಗೊಂದಲ ಕಾಂಗ್ರೆಸ್ ನಲ್ಲಿದೆ. ಆರ್. ವಿ. ದೇಶಪಾಂಡೆಗೆ ಧಾರವಾಡ ಉಸ್ತುವಾರಿಯಾಗಿ ಮುಂದುವರೆಯೋ ಬಯಕೆ ಇದೆ. ಆದ್ರೆ ಅವರು ಕಾರ್ಯಕರ್ತರ, ಮುಖಂಡರ ಕೈಗೆ ಸಿಗಲ್ಲ ಅನ್ನೋ ಮಾತಿದೆ.
ಹಾಗಾಗಿ ದೇಶಪಾಂಡೆಗೆ‌ ಧಾರವಾಡದ ಉಸ್ತುವಾರಿಯಾಗಿ ಮುಂದುವರೆಯೋದು ಡೌಟ್ ಎನ್ನಲಾಗ್ತಿದೆ.

 ಹುಬ್ಬಳ್ಳಿ - ಧಾರವಾಡದಲ್ಲಿ ಪಕ್ಷವನ್ನ ಬಲ ಪಡಿಸಬೇಕಿದೆ. ಅದು ಡಿ.ಕೆ. ಶಿವಕುಮಾರರಿಂದ ಮಾತ್ರ ಸಾಧ್ಯ ಅನ್ನೋದು ಕೈ ಮುಖಂಡರಿಗೆ ಗೊತ್ತಿದೆ. ಜೊತೆಗೆ ಸ್ಥಳೀಯವಾಗಿ ಡಿಕೆಶಿಗೆ ಜಿಲ್ಲಾ ಉಸ್ತುವಾರಿ ನೀಡಬೇಕು ಅನ್ನೋ ಕೂಗು ಕೂಡ ಜೋರಾಗ್ತಿದೆ. ನಿನ್ನೆ ಕೆ. ಸಿ. ವೇಣುಗೋಪಾಲ ಮುಂದೆ ಡಿಕೆಶಿಗೆ ಜಿಲ್ಲಾ ಉಸ್ತುವಾರಿ ನೀಡಬೇಕು ಅಂತಾ ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

ಆ ಭಾಗದ ನಾಯಕರ ವಿರೋಧದ ನಡುವೆಯೂ ಡಿಕೆಶಿಗೆ ಕುಂದಗೋಳ ಬೈ ಎಲೆಕ್ಷನ್  ಉಸ್ತುವಾರಿ ನೀಡಿದ್ದೇ ಈ ಕಾರಣಕ್ಕೆ.  ಡಿಕೆಶಿ ತಂತ್ರಗಾರಿಕೆಯಿಂದ ಚುನಾವಣೆ ಗೆಲ್ಲೋದು ಕೈ ಪಡೆ ಗುರಿ. ಗೆದ್ದರೆ ಡಿಕೆಶಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಹೊಣೆ ನೀಡೋದು. ಇದು ವೇಣುಗೋಪಾಲ ಮಾಸ್ಟರ್ ಪ್ಲಾನ್ ಎನ್ನಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗುತ್ತಿದ್ದಂತೆ ಕಲ್ಲಡ್ಕ ಪ್ರಭಾಕರ ಭಟ್‌ ಅನ್ನು ಕೆಣಕಿದ ಕಾಂಗ್ರೆಸ್‌ ನಾಯಕ

ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

ಬುದ್ಧಿಮಾತು ಹೇಳಿದ ಗುರುವಿಗೆ ಟಿಫನ್ ಬಾಕ್ಸ್‌ನಲ್ಲಿ ತಂದ ಆಪತ್ತು

ಧರ್ಮಸ್ಥಳ ನಿರ್ಮಿಸಲ್ಪಟ್ಟಿದ್ದು, ಸತ್ಯ, ನಂಬಿಕೆ, ಸಮರ್ಪಣೆಯಿಂದ: ಎಸ್‌ಡಿಎಂ ಸಂಸ್ಥೆ

ಮುಂದಿನ ಸುದ್ದಿ
Show comments