Webdunia - Bharat's app for daily news and videos

Install App

ಗಂಡ ಇಲ್ಲದ ಹೆಣ್ಣು, ಪತ್ನಿ ಕಳೆದುಕೊಂಡ ಗಂಡು ಸೇರಿದ್ದೇ ಮೈತ್ರಿ ಸರಕಾರವಂತೆ!

Webdunia
ಸೋಮವಾರ, 13 ಮೇ 2019 (12:48 IST)
ಗಂಡ ಕಳೆದುಕೊಂಡ ಹೆಣ್ಣು, ಇನ್ನೊಂದು ಹೆಂಡತಿ ಕಳೆದುಕೊಂಡ ಗಂಡು ಇವರಿಬ್ಬರೂ ಸೇರಿ ಮದುವೆಯಾಗಿದ್ದಾರೆ. ಇದೇ ರಾಜ್ಯದ ಮೈತ್ರಿ ಸರಕಾರ. ಒತ್ತಾಯಪೂರ್ವಕ ಮೈತ್ರಿ ಮದುವೆಯಾಗಿದೆ ಅಂತ ಬಿಜೆಪಿ ಶಾಸಕ ವ್ಯಂಗ್ಯವಾಡಿದ್ದಾರೆ.

ರಾಜ್ಯದ ಜನ ನಿಜವಾದ ಜನಾದೇಶ ಬಿಜೆಪಿಗೆ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್- ಜೆಡಿಎಸ್ ಗೆ ಕೊಟ್ಟಿರಲಿಲ್ಲ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಜಬರದಸ್ತಿ ಮದುವೆ ಮಾಡಿಕೊಂಡಿದ್ದಾರೆ. ತತ್ವ ಸಿದ್ಧಾಂತ ಏನು ಇಲ್ಲ. ರಾಜ್ಯದ ಜನ ಅಕ್ಷತೆಯೂ ಹಾಕಿಲ್ಲ. ಹೀಗಂತ ಕಲಬುರಗಿಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಬಗ್ಗೆ ಹೆಚ್. ವಿಶ್ವನಾಥ್ ಹೇಳಿಕೆ ನೀಡಿರೋದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಈ ಸಂಸಾರ ಇಷ್ಟು ದಿನ ನಡೆದಿದ್ದೇ ದೊಡ್ಡದು. ಇನ್ನೂ ಬಹಳ ದಿನ ನಡೆಯಲ್ಲ ಎಂದರು.

ದೇವೇಗೌಡ- ಕುಮಾರಸ್ವಾಮಿ ಇಬ್ರೂ ಸೇರಿ ಸಿದ್ರಾಮಯ್ಯರನ್ನ ಸಿಎಂ ಮಾಡೋದು ಸಾಧ್ಯವೇ ಇಲ್ಲ. ಇದೇ ಸ್ಥಿತಿ ಹಿಂದೆ ಬಂದಾಗ ಧರ್ಮಸಿಂಗ್ ರನ್ನು ದೇವೇಗೌಡರು ಸಿಎಂ ಮಾಡಿದ್ರು. ಈಗ ಸಿದ್ದರಾಮಯ್ಯನವರು ಮುಂದಿನ ನಾಲ್ಕು ವರ್ಷದವರೆಗೆ ಸಿಎಂ ಕನಸ್ಸು ಬಿಡಬೇಕು ಎಂದರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments