Webdunia - Bharat's app for daily news and videos

Install App

ಕುಡಿತದ ದಾಸರಾದವರು ಓದಲೇಬೇಕಾದ ದುರಂತ ಕಥೆ ಇದು

Webdunia
ಸೋಮವಾರ, 9 ಮೇ 2016 (08:37 IST)
ಪತ್ನಿ ಹಲ್ಲೆ ನಡೆಸಿದ್ದರಿಂದ ನೊಂದ ಕುಣಿಗಲ್‌ನ ಮಹಿಳೆಯೋರ್ವಳು ಮಕ್ಕಳಿಗೆ ಬೆಂಕಿ ಹಚ್ಚಿ ತಾನು ಕೂಡ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಘಟನೆ ನಿಮಗೆ ಗೊತ್ತಿರಲಿಕ್ಕೆ ಸಾಕು. ಕಳೆದ ವಾರ ಈ ಘಟನೆ ನಡೆದಿತ್ತು. ಪತ್ನಿ ಮತ್ತು ಮಕ್ಕಳ ಸಾವಿನಿ೦ದ ನೊ೦ದ ಪತಿ ಕೂಡ ಈಗ ನೇಣು ಬಿಗಿದುಕೊ೦ಡು ಮೃತಪಟ್ಟಿದ್ದಾನೆ. 

 
ಮೃತನನ್ನು ತಾಲ್ಲೂಕಿನ ಗಾಣಿಮೇಸ್ತ್ರೀಪಾಳ್ಯದ ನಿವಾಸಿ ಜಗದೀಶ್(32) ಎಂದು ಗುರುತಿಸಲಾಗಿದ್ದು  ಕಳೆದ ಮೇ 1 ರಂದು ಕುಡಿದ ಮತ್ತಿನಲ್ಲಿ ಆತ ಮುದ್ದೆಕೋಲಿನಿಂದ ಪತ್ನಿಯ ಮೇಲೆ ದಾಳಿ ನಡೆಸಿದ್ದ. ಆಕೆಯ ಕಾಲಿಗೆ ಗಂಭೀರ ಪೆಟ್ಟು ತಗುಲಿತ್ತು. ಇದರಿಂದ ನೊಂದಿದ್ದ ಪತ್ನಿ ಚ೦ದ್ರಮ್ಮ (26) ಮಗಳು ಧನು (4) ಮತ್ತು ಮಗ ಗೌತಮ್ (3) ನ ಜತೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. 
 
ಚಿಂತಾಜನಕ ಸ್ಥಿತಿಯಲ್ಲಿದ್ದ ತಾಯಿ ಮಕ್ಕಳನ್ನು ಬೆ೦ಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತ ಪಟ್ಟಿದ್ದರು. ಚ೦ದ್ರಮ್ಮ ಘಟನೆ ನಡೆದ ದಿನವೇ ಮೃತಪಟ್ಟಿದ್ದರೆ, ಮಾರನೆಯ ದಿನ ಮಗಳು ಧನು ಮೃತಳಾಗಿದ್ದಳು. ಅದಾಗಲೆ ತೀವ್ರ ಆಘಾತಕ್ಕೊಳಗಾಗಿದ್ದ ಜಗದೀಶ್ ಚಿಕ್ಕ ಮಗು ಗೌತಮ್ ಮೇ 6ರ೦ದು ಮೃತ ಪಟ್ಟಾಗ ಸಂಪೂರ್ಣ ಕುಸಿದು ಹೋಗಿದ್ದ.  ಮೇ 7 ರ೦ದು ಪುತ್ರನ ಅ೦ತ್ಯಕ್ರಿಯೆ ನೆರವೇರಿಸಿ ಬ೦ದ ಜಗದೀಶ್ ತಾನು ಕೂಡ ನೇಣು ಬಿಗಿದುಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿದ್ದಾನೆ.
 
ಮದ್ಯ ವ್ಯಸನದ ಪರಿಣಾಮ ಸಂಪೂರ್ಣ ಕುಟುಂಬ ಅಕಾಲಿಕ ಮರಣವನ್ನಪ್ಪಿದ್ದು ಮಾತ್ರ ವಿಪರ್ಯಾಸ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ಯೋಗ ದಿನಾಚರಣೆಯಲ್ಲಿ ನಟಿ ಸುಧಾರಾಣಿ, ನಟ ಕೋಮಲ್

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ವಿಶಾಖಪಟ್ಟಣದಲ್ಲಿ ಮೋದಿ ಯೋಗ

Karnataka Weather: ವಾರಂತ್ಯಕ್ಕೆ ಮಳೆ ಬರುವ ಸಾಧ್ಯತೆ ಎಷ್ಟಿದೆ, ಇಲ್ಲಿದೆ ಹವಾಮಾನ ವರದಿ

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಮುಂದಿನ ಸುದ್ದಿ
Show comments