Webdunia - Bharat's app for daily news and videos

Install App

ವೇಶ್ಯಾವಾಟಿಕೆ ಜಾಲದ ಮೇಲೆ ಸಿಸಿಬಿ ಪೊಲೀಸರ ದಾಳಿ: ಲಾಡ್ಜ್‌ಗೆ ಬೀಗ

Webdunia
ಭಾನುವಾರ, 8 ಮೇ 2016 (19:19 IST)
ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೈಸೂರು ರಸ್ತೆಯ ನ್ಯೂತರಗು ಪೇಟೆಯ ಶಿವಪ್ಯಾಲೇಸ್ ಲಾಡ್ಜ್‌ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆ ಜಾಲವನ್ನು ಬಯಲು ಮಾಡಿದ್ದಾರೆ. ಸುಮಾರು 10 ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತೆಂದು ಹೇಳಲಾಗುತ್ತಿದೆ. ಸುರಂಗ ಮಾದರಿಯಲ್ಲಿ ಅಂಡರ್‌ಗ್ರೌಂಡ್ ನಿರ್ಮಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.  

ಕಟ್ಟಡದ ಕೆಳಗೆ ನೆಲಮಹಡಿಗಳನ್ನು ನಿರ್ಮಿಸಿ, ಪೊಲೀಸರ ದಾಳಿಯ ಸುಳಿವು ಸಿಗುತ್ತಿದ್ದಂತೆ ಮಂಚದ ಕೆಳಗೆ ಸುರಂಗವನ್ನು ನಿರ್ಮಿಸಿ ಅದರಿಂದ ಕೆಳಕ್ಕೆ ವೇಶ್ಯೆಯರು ಏಣಿಯ ಮೂಲಕ ಮೂರನೇ ಮಹಡಿಯಿಂದ ಇಳಿದು ತಪ್ಪಿಸಿಕೊಳ್ಳುತ್ತಿದ್ದರು. ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯರು ಹಾಗೂ ಗ್ರಾಹಕರು ಬಚ್ಚಿಟ್ಟುಕೊಳ್ಳಲು ರೂಂ ವ್ಯವಸ್ಥೆ ಕೂಡ ಮಾಡಲಾಗಿತ್ತು. ಸ್ಥಳೀಯ ಯುವತಿಯರಿಗೂ ಹಣದಾಸೆ ತೋರಿಸಿ ಈ ದಂಧೆ ನಡೆಸುತ್ತಿದ್ದರು.

ಪೊಲೀಸರು ಬಂದ ಕೂಡಲೇ ಕಾಲಿಂಗ್ ಬೆಲ್ ಒತ್ತುತ್ತಿದ್ದರು. ತಕ್ಷಣವೇ ಸುರಂಗದ ಮೂಲಕ ವೇಶ್ಯೆಯರು, ಗ್ರಾಹಕರು ತಪ್ಪಿಸಿಕೊಳ್ಳುತ್ತಿದ್ದರು. ದಾಳಿಯ ವೇಳೆ ಕೋಲ್ಕತಾ ಮೂಲದ ನಾಲ್ವರು ಮತ್ತು ಮೈಸೂರು ಮೂಲದ ಒಬ್ಬ ಯುವತಿಯನ್ನು ರಕ್ಷಿಸಲಾಗಿದೆ. ಪಿಂಪ್‌ಗಳಾದ ಮಂಜುನಾಥ್, ಮಹೇಶ್, ರಘು, ಧರ್ಮೇಂದ್ರ ಕುಮಾರ್, ಅಶ್ರಫ್, ಚಾಂದ್ ಎಂಬವರನ್ನು ಬಂಧಿಸಲಾಗಿದೆ. ಶಿವಪ್ಯಾಲೇಸ್ ಲಾಡ್ಜ್‌ಗೆ ಬೀಗ ಜಡಿಯಲಾಗಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಇಳಿಕೆ

ಅಲ್ಪಸಂಖ್ಯಾತರಿಗೆ ವಸತಿ ಯೋಜನೆ ಎಂದ ಸಿದ್ದರಾಮಯ್ಯ: ಹಾಗೆಂದ್ರೆ ಯಾರು ಸಾರ್ ಎಂದ ನೆಟ್ಟಿಗರು

ಬಿಜೆಪಿಗೆ ಮತ್ತೆ ನೀವೇ ಅಧ್ಯಕ್ಷರಾ ಎಂದು ಕೇಳಿದ್ದಕ್ಕೆ ವಿಜಯೇಂದ್ರ ಹೇಳಿದ್ದೇನು ಗೊತ್ತಾ

ಕೇಂದ್ರ ಹೇಳಿದಂತೇ ನಾವು ಅಲ್ಪ ಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದು: ಸಿದ್ದರಾಮಯ್ಯ

ಬಿಜೆಪಿ ಯೋಗ ದಿನಾಚರಣೆಯಲ್ಲಿ ನಟಿ ಸುಧಾರಾಣಿ, ನಟ ಕೋಮಲ್

ಮುಂದಿನ ಸುದ್ದಿ
Show comments