ಯಾರ ಪ್ರೇರಣೆಯಿಂದ ಇದೆಲ್ಲ ಆಯ್ತು: ಡಿಕೆಶಿ ಹೆಸರು ಹೇಳದೆಯೇ ಗುಡುಗಿದ ದೇವೇಗೌಡ

Sampriya
ಶುಕ್ರವಾರ, 3 ಅಕ್ಟೋಬರ್ 2025 (16:20 IST)
Photo Credit X
ಬೆಂಗಳೂರು: ದೇವೇಗೌಡ, ಕುಮಾರಸ್ವಾಮಿ ಕುಟುಂಬ ನನ್ನನ್ನು ಜೈಲಿಗೆ ಕಳುಹಿಸಲು ಕಾಯ್ತಿದ್ದಾರೆಂಬ ಡಿಸಿಎಂ ಡಿಕೆ ಶಿವಕುಮಾರ್ ಆರೋಪಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಗರಂ ಆಗಿದ್ದಾರೆ. 

ಈ ಸಂಬಂಧ ಜೆಪಿ ಭವದನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3 ತಿಂಗಳ ನಮ್ಮ ಮನೆ ಮುಂದೆ ಹಗಲು ರಾತ್ರಿ ಮಾಧ್ಯಮದವರು ನಿಂತಿದ್ದರು. ಯಾರ ಪ್ರೇರಣೆಯಿಂದ ಇದೆಲ್ಲ ಆಯ್ತು ಎಂದು ಡಿಕೆ ಶಿವಕುಮಾರ್ ಹೆಸರು ಹೇಳದೆಯೇ ಕಿಡಿಕಾರಿದರು. 

ದಯಮಾಡಿ ಬೇರೊಬ್ಬರ ಹೆಸರು ತೆಗೆದು ಚರ್ಚೆ ಮಾಡೋದು ಬೇಡ. ನಾನು ಆ ವಿಷಯದಲ್ಲಿ ಮಾತಾಡುವುದಿಲ್ಲ.  ನಾನು ಆಪಾದನೆ ಮಾಡಲ್ಲ. ಆವತ್ತು ನಾನು ಮಾತಾಡಿಲ್ಲ. ಇವತ್ತು ಮಾತಾಡಲ್ಲ. ಆ ದಿನಗಳನ್ನು ನೀವೇ ನೋಡಿದ್ದೀರಿ, ಅದರ ಹಿಂದಿನ ಶಕ್ತಿ ಏನು ಅಂತ ನಿಮಗೆ ಗೊತ್ತಿದೆ ಎಂದರು.

ಯಾರು ಏನೇ ಹೇಳಿದ್ರು, ನಾವು ಸಣ್ಣ ರಾಜಕೀಯ ಪಕ್ಷದಿಂದ ಬಂದವರು. ಅದನ್ನ ಉಳಿಸಿಕೊಳ್ಳೋಕೆ ಶಕ್ತಿ ಮೀರಿ ಕೆಲಸ ಮಾಡ್ತೀವಿ. ಡಿಕೆ ಶಿವಕುಮಾರ್ ಬಗ್ಗೆ ನಾನು ಮಾತಾಡಲ್ಲ. 20 ವರ್ಷದ ಹಿಂದೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗಿನಿಂದ ನಾನು ಮಾತಾಡಿಲ್ಲ ಎಂದು ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.

ಬಿಡದಿ ಟೌನ್‌ಶಿಪ್ ಮಾಡೋಕೆ ಡಿಕೆಶಿವಕುಮಾರ್ ಮುಂದಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಡದಿಯಲ್ಲಿ ನಮ್ಮ ಪಕ್ಷದವರು ಇದರ ವಿರುದ್ಧ ಪ್ರತಿಭಟನೆ ಮಾಡಿದರು. ನಾನು ನೋಡಿದೆ. 

ಈಗ ಅವರ ಸರ್ಕಾರ ಇದೆ. ಅವರು ಏನೇ ಹೇಳಿದರೂ ತಿರಸ್ಕಾರ ಮನೋಭಾವದಿಂದ ನೋಡಿ. ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು. ಅಲ್ಲಿವರೆಗೂ ನೀವು ಕಾಯಬೇಕು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಂಧನ ಭೀತಿಯಿಂದ ತಲೆಮರೆಸಿಕೊಂಡ್ರಾ ಶಾಸಕ ಬೈರತಿ ಬಸವರಾಜ್

ನಿಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ನಾಳೆ ಪಲ್ಸ್ ಪೋಲಿಯೋ ಹಾಕಿಸಿ

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದು ಗಾಂಧಿ ಕುಟುಂಬ: ಡಿಕೆ ಶಿವಕುಮಾರ್ ಗುಣಗಾನ

ಧ್ವೇಷ ಭಾಷಣದ ಮೊದಲನೇ ಅಪರಾಧಿಯೇ ಪ್ರಿಯಾಂಕ್ ಖರ್ಗೆ: ಗೋವಿಂದ ಕಾರಜೋಳ

ಮಿಸ್ಟರ್ ಕ್ಲೀನ್ ಕೃಷ್ಣಭೈರೇಗೌಡ ಹಗರಣ ಆರೋಪಕ್ಕೆ ಇವರೇ ಕಾರಣವಂತೆ : ಆರ್ ಅಶೋಕ್ ಗಂಭೀರ ಆರೋಪ

ಮುಂದಿನ ಸುದ್ದಿ
Show comments