Select Your Language

Notifications

webdunia
webdunia
webdunia
webdunia

ಹೆಚ್.ವಿಶ್ವನಾಥ್ ಗೆ ಭಿಕ್ಷುಕ ಅಂತ ಕರೆದ ಶಾಸಕರಾರು?

ಸಾ.ರಾ.ಮಹೇಶ್
ಮೈಸೂರು , ಸೋಮವಾರ, 17 ಆಗಸ್ಟ್ 2020 (22:26 IST)
ರಾಜ್ಯದ ಸಾಂಸ್ಕೃತಿಕ ನಗರಿಯಲ್ಲಿ ರಾಜಕೀಯ ಕೆಸರೆರಚಾಟ ಮುಂದುವರಿದಿದೆ.

ಈ ನಡುವೆ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ಅವರ ಮೇಲೆ ಹಲ್ಲೆಗೆ ಸಂಚು ಕೇಸ್ ಗೆ ಶಾಸಕ ಸಾ.ರಾ.ಮಹೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಭಿಕ್ಷುಕನ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಅಂತ ಪರೋಕ್ಷವಾಗಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರಿಗೆ ಶಾಸಕ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.

ನನ್ನನ್ನು ಕೊಚ್ಚೆ ಅಂತ ವಿಶ್ವನಾಥ್ ಕರೆದಿದ್ದರು. ಭಿಕ್ಷುಕ ಅಂತ ನಾನು ಅವರಿಗೆ ಹೇಳಿದ್ದೇನೆ. ಭಿಕ್ಷುಕನ ಬಗ್ಗೆ ಕೊಚ್ಚೆ ಮಾತನಾಡುವುದಿಲ್ಲ. ಮುಂದೆಯೂ ನಾನೆಂದೂ ಮಾತನಾಡಬಾರದೆಂದು ನಿರ್ಧಾರ ಮಾಡಿದ್ದೇನೆ ಅಂತ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್.ವಿಶ್ವನಾಥ್ ಗೆ ಸಚಿವ ಸ್ಥಾನ?