Publish Date: Fri, 08 Dec 2023 (14:00 IST)
Updated Date: Fri, 08 Dec 2023 (14:04 IST)
ತಾಳಿ ಕಟ್ಟಲು ರೆಡಿಯಾಗಿದ್ದ ವರನಿಗೆ ವಧು ಶಾಕ್ ನೀಡಿದ್ದಾಳೆ.. ತಾಳಿ ಕಟ್ಟುವ ಕೆಲ ನಿಮಿಷಗಳ ಮೊದಲು ವಧು ಮದುವೆ ಆಗಲ್ಲ ಎಂದು ಉಲ್ಟಾ ಹೊಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್, ತಿಪ್ಪರೆಡ್ಡಿಹಳ್ಳಿ ಐಶ್ವರ್ಯ ವಧು ಮತ್ತು ವರರಾಗಿದ್ದು, ಮಂಜುನಾಥ್ & ಐಶ್ವರ್ಯ ನಡುವೆ ವಿವಾಹ ನಿಶ್ಚಯವಾಗಿತ್ತು, ಇನ್ನು ಇಬ್ಬರು ಪರಸ್ಪರ ಒಪ್ಪಿಕೊಂಡೆ ಮದುವೆಗೆ ಮುಂದಾಗಿದ್ರು.. ಆದ್ರೆ ಕೊನೆ ಕ್ಷಣದಲ್ಲಿ ವಧು ನನಗೆ ಈ ಮದುವೆ ಬೇಡ ಎಂದು ತಾಳಿಗೆ ಕೈ ಅಡ್ಡ ಹಿಡಿದಿದ್ದಾಳೆ.. ಈ ವಿಡಿಯೋ ಸಹ ವೈರಲ್ ಆಗಿದ್ದು, ಇನ್ನು ಯುವತಿ ಮದುವೆಯನ್ನ ಯಾಕೆ ನಿರಕಾರಿಸಿದ್ದಾಳೆಂದು ತಿಳಿದುಬಂದಿಲ್ಲ.
ಯುವತಿ ನಡೆಗೆ ಯುವಕನ ಸಂಬಂಧಿಕರ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ವಿಚಾರ ಸಂಬಂಧ ಯುವತಿ ಮನೆಯವರು- ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ಸಹ ನಡೆದಿದೆ.. ಇನ್ನು ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.