Select Your Language

Notifications

webdunia
webdunia
webdunia
webdunia

ಮಾಧ್ಯಮಗಳು ಬಾಹುಬಲಿಗಳಾ? ಶಾಸಕ ಬಿಆರ್ ಪಾಟೀಲ್ ಪ್ರಶ್ನೆ!

ಮಾಧ್ಯಮಗಳು ಬಾಹುಬಲಿಗಳಾ? ಶಾಸಕ ಬಿಆರ್ ಪಾಟೀಲ್ ಪ್ರಶ್ನೆ!
Bangalore , ಬುಧವಾರ, 22 ಮಾರ್ಚ್ 2017 (13:06 IST)
ಬೆಂಗಳೂರು: ಜನಪ್ರತಿನಿಧಿಗಳಿಗೆ ಮಾಧ್ಯಮಗಳೇ ಒಂಥರಾ ಶತ್ರುಗಳು ಎನ್ನುವುದು ಸುಳ್ಳಲ್ಲ. ಎಲ್ಲಿ ಹೋದರೂ ಹಿಂದೆ ಬಂದು ತಪ್ಪು ಹುಡುಕಿ ಹೇಳುವ ಮಾಧ್ಯಮಗಳ ಮೇಲೆ ಹರಿಹಾಯ್ದ ಶಾಸಕ ಬಿಆರ್ ಪಾಟೀಲ್, ಮೀಡಿಯಾದವ್ರು ಏನು ಬಾಹುಬಲಿಗಳಾ ಎಂದು ಪ್ರಶ್ನಿಸಿದ್ದಾರೆ.

 

ನಾವು ಎಲ್ಲಿ ಹೋದರೂ ಹಿಂದೇ ಬರ್ತಾರೆ. ಸದನದಲ್ಲಿ ತೂಕಡಿಸಿದ್ರೂ ವಿಡಿಯೋ ಮಾಡಿ ಪಬ್ಲಿಷ್ ಮಾಡ್ತಾರೆ. ಇವರೇನು ಬಾಹುಬಲಿಗಳಾ ಎಂದು ಶಾಸಕರು ಸದನದಲ್ಲಿ ಪ್ರಶ್ನಿಸಿದ್ದಾರೆ.

 
ಹಿಟ್ಲರ್ ನಂತಹ ನಾಯಕ ಕೂಡಾ ಮಾಧ್ಯಮಗಳಿಗೆ ಹೆದರುತ್ತಿದ್ದ. ಹಾಗೇ, ನಾವೇನಾದರೂ, ತಪ್ಪು ಮಾಡಿದರೆ ಹೇಳಲಿ. ಅದು ಬಿಟ್ಟು, ತೂಕಡಿಸಿದರೆ ಎಲ್ಲಾ ವಿಡಿಯೋ ಮಾಡಿ ತೋರಿಸ್ತೀರಲ್ಲಾ ಎಂದು ಮಾಧ್ಯಮಗಳ ಮೇಲೆ ಅಸಮಧಾನ ವ್ಯಕ್ತಪಡಿಸಿದ್ದಾರೆ ಶಾಸಕ ಸಾಹೇಬರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಗೆ ರೋಡ್ ಮಾಡಿಕೊಡಲ್ಲ ಏನ್ಮಾಡ್ತೀಯಾ? ಶಾಸಕ ಅಭಯ್ ಚಂದ್ರ ಜೈನ್ ದರ್ಪ