Webdunia - Bharat's app for daily news and videos

Install App

SC/ST ಗೆ ಬಿಜೆಪಿ ಏನು ಮಾಡಿದೆ?

Webdunia
ಶನಿವಾರ, 11 ಮೇ 2019 (12:32 IST)
ಎಸ್.ಸಿ., ಎಸ್.ಟಿ ವರ್ಗಗಳಿಗೆ ಬಿಜೆಪಿ ಏನು ಮಾಡಿದೆ ಅಂತ ಹೇಳಲಿ. ಈ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಅಂತ ಮಾಜಿ ಸಿಎಂಗೆ, ಮಾಜಿ ಸಿಎಂ ಸವಾಲು ಹಾಕಿದ್ದಾರೆ.

ಬಿಜೆಪಿ ಎಸ್.ಸಿ., ಎಸ್.ಟಿ.ಗೆ ಏನು ಮಾಡಿದೆ ಎಂಬುದನ್ನು ಬಿ.ಎಸ್.ಯಡಿಯೂರಪ್ಪ ಹೇಳಬೇಕು. ಈ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಕೋಲಿ ಸಮಾಜವನ್ನು ಎಸ್.ಟಿ.ಗೆ ಶಿಫಾರಸ್ಸು ಮಾಡಿದ್ದು ನಾವು. ಆದ್ರೆ ನರೇಂದ್ರ ಮೋದಿ ಯಾಕೆ ಶಿಫಾರಸ್ಸು ಅಂಗೀಕರಿಸಿ ಎಸ್.ಟಿ. ಮಾಡಲಿಲ್ಲವೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಎಸ್.ಟಿ. ಗೆ ಸೇರ್ಪಡೆ ಮಾಡಿಸೋದಾಗಿ ಬಾಬುರಾವ್ ಚಿಂಚನಸೂರ ಹೇಳ್ತಾರೆ. ಚಿಂಚನಸೂರರನ್ನು ಸಚಿವರನ್ನಾಗಿಸಿದ್ದು ಕಾಂಗ್ರೆಸ್. ಆದ್ರೆ ಬಿಜೆಪಿ ಅವರು ಚಿಂಚನಸೂರಗೆ ತಮಟೆ ಹೊಡೆಯೋ ಕೆಲಸ ಕೊಟ್ಟಿದ್ದಾರೆ. ಗೊಂಡ ಸಮಾಜವನ್ನು ಎಸ್.ಟಿ.ಗೆ ಶಿಫಾರಸ್ಸು ಮಾಡಿದವರು ನಾವು. ಆದ್ರೆ ನರೇಂದ್ರ ಮೋದಿ ಅದನ್ನು ಪುರಸ್ಕರಿಸಿಲ್ಲ. ಹೀಗಿರಬೇಕಾದ್ರೆ ಬಿಜೆಪಿಯನ್ನೇಕೆ ಬೆಂಬಲಿಸುತ್ತೀರಿ ಎಂದು ಕೇಳಿದ್ರು.

ಏನೂ ಮಾಡದೇ ಮತ ಕೇಳಿಕೊಂಡು ಬರಲು ನಾಚಿಕೆಯಾಗಬೇಕು ಬಿಜೆಪಿಯವರಿಗೆ ಎಂದು ಸಿದ್ದರಾಮಯ್ಯ, ಕಲಬುರಗಿ ಜಿಲ್ಲೆಯ ಚಿಂಚೋಳಿಯ ಕೊಂಚವರಂ ಕಾಂಗ್ರೆಸ್  ಪ್ರಚಾರ ಸಭೆಯಲ್ಲಿ ದೂರಿದ್ರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments