ಬರದ ನಾಡಿನಲ್ಲಿ ಕೈ ಬೀಸಿ ಕರೆಯುತ್ತಿರೋದು ಏನು?

Webdunia
ಭಾನುವಾರ, 1 ಸೆಪ್ಟಂಬರ್ 2019 (19:00 IST)
ಬರದ ನಾಡು, ಕೋಟೆ ನಾಡು ಅಂತೆಲ್ಲ ಕರೆಸಿಕೊಳ್ಳುವ ನಗರ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಹಚ್ಚ ಹಸಿರಿನಿಂದ ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ?

ಚಿತ್ರದುರ್ಗ ಈಗ ವನ್ಯ ಜೀವಿಗಳ ತಾಣವಾಗಿ ಪ್ರಾಣಿ ಪ್ರಿಯರನ್ನ ತನ್ನತ್ತ ಸೆಳೆಯುತ್ತಿದೆ. ತಳಿರು ತೋರಣಗಳಿಂದ ಸಿಂಗಾರಗೊಂಡಿರುವ ದ್ವಾರ. ಒಳಗೆ ಪ್ರವೇಶ ನೀಡುತ್ತಿದ್ದಂತೆ ಕಣ್ಣಿಗೆ ಕಾಣುವ ವನ್ಯ ಮೃಗಗಳು ಮತ್ತು ಜಿಂಕೆಗಳು. ಸುತ್ತಲೂ ಹಸಿರನ್ನೇ ಹೊತ್ತುಕೊಂಡಿರುವ ಹಸಿರ ಸಿರಿ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಕೋಟೆ ನಾಡು ಚಿತ್ರದುರ್ಗದ ಮಿನಿ ಮೃಗಾಲಯ ಆಡು ಮಲ್ಲೇಶ್ವರದಲ್ಲಿ. ಕೇವಲ ಕೋಟೆ ಕೊತ್ತಲು ಅಷ್ಟೇ ಅಲ್ಲದೆ ಚಿತ್ರದುರ್ಗದಲ್ಲಿ ಮತ್ತೊಂದಿಷ್ಟು ಸುಂದರವಾದ ಜಾಗಗಳಿವೆ.

ಈಗಾಗಲೇ ಆಡು ಮಲ್ಲೇಶ್ವರ ದಲ್ಲಿ ಹಲವಾರು ಕಾಡು ಪ್ರಾಣಿಗಳನ್ನು ವೀಕ್ಷಣೆಗೆ ಮಿನಿ ಝೂ ಮಾಡಲಾಗಿತ್ತು. ಆದ್ರೆ ಇತ್ತೀಚೆಗೆ ಪ್ರಾಣಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಆಗಮಿಸುತ್ತಿದ್ದು ಈ ಹಿನ್ನೆಲೆ ಅದನ್ನ ಮತ್ತೆ ಮರು ನಿರ್ಮಾಣದ ಜೊತೆಗೆ ಹಲವಾರು ವಿನ್ಯಾಸಗಳನ್ನು ಆಡು ಮಲ್ಲೇಶ್ವರದಲ್ಲಿ ಮಾಡಲಾಗಿದೆ. ಅದ್ರ ಉದ್ಘಾಟನೆ ಆಗಿದ್ದು ಶಾಸಕ ತಿಪ್ಪಾರೆಡ್ಡಿ ಉದ್ಘಾಟನೆ ಮಾಡಿದ್ರು.

ಕಿರು ಮೃಗಾಲಯದಲ್ಲಿ ಈಗಾಗಲೇ ಸ್ಥಳೀಯ ಪ್ರಾಣಿಗಳನ್ನು ತರಲಾಗಿದೆ. ಚಿರತೆ, ಜಿಂಕೆ, ಕೃಷ್ಣಮೃಗ ಸೇರಿದಂತೆ ಕರಡಿ, ಅಮ್ರೆಸ್ತರ್ ಪೇಸೆಂಟ್, ಕಲರ್ ಪೇಸೆಂಟ್ ಗಳನ್ನ ಮಿನಿ ಮೃಗಾಲಯಕ್ಕೆ ಆಗಮನವಾಗಿದೆ. ಒಟ್ಟು 3 ಕೋಟಿ ವೆಚ್ಚದಲ್ಲಿ ಮತ್ತೆ ಹೊಸ ವಿನ್ಯಾಸದೊಂದಿಗೆ ಮೃಗಾಲಯವನ್ನ ನವೀಕರಿಸಲಾಗಿದೆ.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಅಕ್ಕನನ್ನು ಮಾರಾಟ ಮಾಡ್ಬೇಡಿ, ಅಕ್ಕನ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಮುಂದಿನ ಸುದ್ದಿ
Show comments