Select Your Language

Notifications

webdunia
webdunia
webdunia
webdunia

ದೇವಸ್ಥಾನದ ಕೆರೆಗೆ ಬಿದ್ದ ಮೇಸ್ತ್ರಿ ಏನಾದನು?

ದೇವಸ್ಥಾನದ ಕೆರೆಗೆ ಬಿದ್ದ ಮೇಸ್ತ್ರಿ ಏನಾದನು?
ಕುಂದಾಪುರ , ಮಂಗಳವಾರ, 1 ಜನವರಿ 2019 (19:41 IST)
ದೇವಸ್ಥಾನದ ಕೆರೆಗೆ ಬಿದ್ದು ಗಾರೆ ಕೆಲಸ ಮಾಡುವ ಮೇಸ್ತ್ರಿ ಹೆಣವಾದ ಘಟನೆ ನಡೆದಿದೆ.

ಕುಂದಾಪುರದ ಕೋಟೇಶ್ವರದಲ್ಲಿ ಘಟನೆ ನಡೆದಿದೆ. ಕೋಟಿಲಿಂಗೇಶ್ವರ ಕೋಟಿತೀರ್ಥ ಸಮೀಪದ ಸಣ್ಣ‌ಕೆರೆಯಲ್ಲಿ
ಕೋಟೆಶ್ವರ ದೊಡ್ಡೋಣಿ ನಿವಾಸಿ ರಾಘವೇಂದ್ರ ದೇವಾಡಿಗ (47) ಸಾವನ್ನಪ್ಪಿದ್ದಾರೆ.
ಬೆಳಿಗ್ಗೆ ವಾಕಿಂಗ್ ಹೋದ ಸಂದರ್ಭ ನಡೆದ ಘಟನೆ ಇದಾಗಿದೆ.

ಕಾಲು ತೊಳೆಯಲು ಕೆರೆಗಿಳಿದಾಗ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಸಾವನ್ನಪ್ಪಿದ್ದು, ಬೆಳಿಗ್ಗೆ ಕೆರೆಯಲ್ಲಿ ಮೃತದೇಹ, ಕೆರೆ ದಂಡೆ ಮೇಲೆ ಚಪ್ಪಲಿ ಪತ್ತೆಯಾಗಿವೆ.
ಸ್ಥಳಕ್ಕಾಗಮಿಸಿದ ಕುಂದಾಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೊಸವರ್ಷದ ದಿನವೇ ಸಾಲದ ಶೂಲಕ್ಕೆ ಅನ್ನದಾತ ಬಲಿ