Webdunia - Bharat's app for daily news and videos

Install App

ನಿನ್ನ ನೋಡಿದ್ರೆ ಮೈ ಝುಮ್ ಅನ್ನುತ್ತೆ, ಗೋಡೌನ್ ನಲ್ಲಿ ಮಹಿಳೆಗೆ ಮುನಿರತ್ನ ಮಾಡಿದ್ದೇನು

Krishnaveni K
ಶುಕ್ರವಾರ, 20 ಸೆಪ್ಟಂಬರ್ 2024 (10:49 IST)
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ನಾಯ್ಡು ತನ್ನ ಮೇಲೆ ನಡೆಸಿದ ಲೈಂಗಿಕ ಕಿರುಕುಳದ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಎಳೆ ಎಳೆಯಾಗಿ ವಿವರಿಸಿದ್ದಾರೆ. ಗೋಡೌನ್ ನಲ್ಲಿ ನಡೆದ ಘಟನೆಯನ್ನು ಮಹಿಳೆ ಇಂಚಿಂಚೂ ವಿವರಿಸಿದ್ದಾಳೆ.

ಕೊವಿಡ್ ಟೈಮ್ ನಲ್ಲಿ ಮಹಿಳೆ ಸ್ಥಳೀಯ ಕಾರ್ಪೊರೇಟರ್ ಸಹಾಯದಿಂದ ಮಾಸ್ಕ್ ವಿತರಸಿದ್ದಳು. ಇದರ ಬಗ್ಗೆ ತಿಳಿದ ಮುನಿರತ್ನ ಕರೆ ಮಾಡಿ ಭೇಟಿಯಾಗಲು ಹೇಳುತ್ತಾರೆ. ಅದರಂತೆ ಅವರ ಕಚೇರಿಗೆ ಹೋದಾಗ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಮುಂದೊಂದು ದಿನ ನಿಮ್ಮ ಸಹಾಯ ಬೇಕಾಗುತ್ತದೆ. ಆಗ ಹೇಳುತ್ತೇನೆ ಎಂದಿದ್ದಾರೆ.

ಬಳಿಕ ಗುಡ್ ಮಾರ್ನಿಂಗ್, ಗುಡ್ ನೈಟ್, ಪ್ರೇಮ ಸಂದೇಶಗಳನ್ನು ಕಳುಹಿಸುತ್ತಿದ್ದರು. ಒಂದು ದಿನ ಸ್ನಾನಕ್ಕೆ ಹೋದ ಟೈಂನಲ್ಲಿ ವಿಡಿಯೋ ಕರೆ ಮಾಡಿದಾಗ ನಾನು ರಿಸೀವ್ ಮಾಡುವುದಿಲ್ಲ. ಆದರೆ ನಂತರ ಅವರ ಮಿಸ್ ಕಾಲ್ ನೋಡಿ ಮರಳಿ ಕರೆ ಮಾಡುತ್ತೇನೆ. ಆದರೆ ಆಗ ಯಾಕೆ ರಿಸೀವ್ ಮಾಡಲಿಲ್ಲ ಎಂದು ಕೇಳಿದಾಗ ಸ್ನಾನಕ್ಕೆ ಹೋಗಿದ್ದೆ ಎಂದಿದ್ದೆ. ಆಗ ನಾನು ರೂಂನಲ್ಲಿದ್ದೇನೆ ಎಂದು ತಿಳಿದುಕೊಂಡು ವಿಡಿಯೋ ಕರೆ ಮಾಡಲು ಸೂಚಿಸುತ್ತಾರೆ. ಕರೆ ಮಾಡಿದಾಗ ನಿನ್ನ ನಗ್ನ ದೇಹ ತೋರಿಸಲು ಎನ್ನುತ್ತಾರೆ. ಆಗ ನಾನು ಒಪ್ಪುವುದಿಲ್ಲ. ನನ್ನನ್ನು ಗೋಡೌನ್ ಗೆ ಬಂದು ಭೇಟಿಯಾಗಲು ಹೇಳುತ್ತಾರೆ.

ಕೆಲವು ದಿನ ಬಿಟ್ಟು ಅವರ ಗೋಡೌನ್ ಗೆ ಹೋದಾಗ ಅವರ ಜೊತೆ ಗನ್ ಮ್ಯಾನ್ ಕೂಡಾ ಇರುತ್ತಾರೆ. ನನ್ನ ನೋಡಿದ ತಕ್ಷಣ ನಿನ್ನ ನೋಡಿದ್ರೆ ಮೈ ಝುಮ್ ಎನಿಸುತ್ತದೆ ಎಂದೆಲ್ಲಾ ಅಶ್ಲೀಲವಾಗಿ ಮಾತನಾಡಿ ತಬ್ಬಿಕೊಳ್ಳುತ್ತಾರೆ. ಪ್ರತಿರೋಧಿಸಿದಾಗ ಗನ್ ಮ್ಯಾನ್ ನ್ನು ಆಚೆ ಕಳುಹಿಸಿ ರೇಪ್ ಮಾಡುತ್ತಾರೆ.
ಅದನ್ನು ವಿಡಿಯೋ ಮಾಡಿಕೊಂಡು ಹಲವು ಬಾರಿ ನನ್ನ ಮೇಲೆ ಮುನಿರತ್ನ ಅತ್ಯಾಚಾರ ಮಾಡುತ್ತಾರೆ. ನಾನು ಅಳುತ್ತಾ ಕೂತಿದ್ದಾಗ ಇದನ್ನು ಯಾರಿಗಾದರೂ ಹೇಳಿದರೆ ವಿಡಿಯೋ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಎಚ್ ಐವಿ ಸೋಂಕಿತರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವ ಖಯಾಲಿಯೂ ಅವರಿಗಿತ್ತು. ಇದೇ ರೀತಿ ರಾಜರಾಜೇಶ್ವರಿ ನಗರದ ಕಾರ್ಪೋರೇಟರ್ ಒಬ್ಬರ ಪತಿಗೆ ಎಚ್ ಐವಿ ಸೋಂಕಿತೆ ಜೊತೆ ಲೈಂಗಿಕ ಸಂಪರ್ಕ ನಡೆಸಿ ಅದರ ವಿಡಿಯೋ ಮಾಡಿಟ್ಟುಕೊಂಡಿದ್ದರು. ಬಳಿಕ ಅವರ ಮಗನಿಗೂ ಲೈಂಗಿಕ ಸಂಪರ್ಕ ನಡೆಸುವಂತೆ ಇಲ್ಲದೇ ಇದ್ದರೆ ಎಚ್ಐವಿ ಸೋಂಕು ಇಂಜೆಕ್ಟ್ ಮಾಡುವಂತೆ ಬಲವಂತ ಮಾಡಿದ್ದರು. ಕಾರ್ಪೋರೇಟರ್ ಪತಿಯ ಲೈಂಗಿಕ ಕ್ರಿಯೆಯ ವಿಡಿಯೋವನ್ನು ನನಗೂ ತೋರಿಸಿ ವಿಕೃತಿ ಮೆರೆದಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ