Webdunia - Bharat's app for daily news and videos

Install App

ಬಿಜೆಪಿ ಫಸ್ಟ್ ಲಿಸ್ಟ್ ವಿಳಂಬಕ್ಕೆ ಕಾರಣ ಏನು?

Webdunia
ಮಂಗಳವಾರ, 11 ಏಪ್ರಿಲ್ 2023 (07:29 IST)
40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಸರ್ವೇ ರಿಪೋರ್ಟ್ಗಳಲ್ಲಿ ಗೊಂದಲ ಹಾಗೂ ವ್ಯತ್ಯಾಸ ಕಂಡುಬಂದಿದೆ. ನೈಜ ವರದಿ ನೀಡಲು ರಾಜ್ಯ ನಾಯಕರಿಗೆ ಸೂಚನೆ ನೀಡಲಾಗಿದೆ. ಹಲವು ಕ್ಷೇತ್ರಗಳಲ್ಲಿ ಭಾರೀ ಬಂಡಾಯ ಭೀತಿ ಎದುರಾಗಿದ್ದು, ಟಿಕೆಟ್ ಆಕಾಂಕ್ಷಿಗಳ ಬಂಡಾಯ ಮುಂದೂಡಲು ಹೊಸ ತಂತ್ರ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಟಿಕೆಟ್ ಹಂಚಿಕೆ ರಹಸ್ಯವಾಗಿದ್ದು, ಕುಟುಂಬ ರಾಜಕಾರಣಕ್ಕೆ ಅಂತ್ಯ ಆಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ, ಎಲ್ಲರಿಗೂ ಈ ನಿಯಮ ಅನ್ವಯ ಅನುಮಾನವಾಗಿದೆ. ಶಿಕಾರಿಪುರದಿಂದ ತಮ್ಮ ಬದಲಾಗಿ ಪುತ್ರ ವಿಜಯೇಂದ್ರನಿಗೆ ಬಿಎಸ್ವೈ ಟಿಕೆಟ್ ಕೇಳಿದ್ದಾರೆ.

ಈ ನಡುವೆ ಸಚಿವ ವಿ. ಸೋಮಣ್ಣ ಪುತ್ರ ಅರುಣ್ಗೆ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ. ಸವಿವ ಎಂಟಿಬಿ ನಾಗರಾಜು ಪುತ್ರ ನಿತಿನ್ಗೆ ಹೊಸಕೋಟೆಯಿಂದ, ಶಾಸಕ ತಿಪ್ಪಾರೆಡ್ಡಿ ಪುತ್ರ ಡಾ. ಸಿದ್ದಾರ್ಥ್ಗೆ ಚಿತ್ರದುರ್ಗದಿಂದ, ಮಾಡಾಳ್ ವಿರೂಪಾಕ್ಷಪ್ಪ ಮಲ್ಲಿಕಾರ್ಜುನ್ಗೆ ಚನ್ನಗಿರಿ ಕ್ಷೇತ್ರದಿಂದ, ಸಂಸದ ಸಿದ್ದೇಶ್ವರ ಪುತ್ರ ಅನಿತ್ಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ, ದಿವಂಗತ ಉಮೇಶ್ ಕತ್ತಿ ಕುಟುಂಬಸ್ಥರು ಹುಕ್ಕೇರಿ ಕ್ಷೇತ್ರದಿಂದ ಹಾಗೂ ದಿವಂಗತ ಆನಂದ್ ಮಾಮನಿ ಕುಟುಂಬಸ್ಥರು ಸವದತ್ತಿ ಕ್ಷೇತ್ರದಿಂದ ಟಿಕೆಟ್ಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ವಿಜಯೇಂದ್ರಗೆ ಶಿಕಾರಿ ಪುರದಿಂದ ಬಹುತೇಕ ಟಿಕೆಟ್ ಫಿಕ್ಸ್ ಆಗಿದ್ದು, ಉಳಿದವರಿಗೆ ಟಿಕೆಟ್ ನೀಡುವುದು ಸಂಶಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments