Webdunia - Bharat's app for daily news and videos

Install App

ಆನೆ ಮರಿಗೆ ಮಾವುತರ ಮಕ್ಕಳು ಮಾಡಿದ್ದೇನು? ತಪ್ಪದೇ ಓದಿ

Webdunia
ಮಂಗಳವಾರ, 13 ಆಗಸ್ಟ್ 2019 (15:14 IST)
ಹೆಣ್ಣು ಆನೆ ಮರಿ 'ಶೃತಿ'ಗೆ  ಮಾವುತರ ಮಕ್ಕಳು ಈ ಕೆಲಸ ಮಾಡಿದ್ದಾರೆ. 

ಅಂತರಾಷ್ಟ್ರೀಯ ಆನೆಗಳ ದಿನದ ಅಂಗವಾಗಿ ಆನೆ ಮರಿಯೊಂದಕ್ಕೆ ನಾಮಕರಣ ಮಾಡಿ ಪ್ರತಿದಿನ ಆನೆಗಳನ್ನು ಸಾಕಿ ಸಲಹಿದಂತಹ ಮಾವುತರ ಮಕ್ಕಳ ಕೈನಲ್ಲಿ ಮಣ್ಣಿನಿಂದ ಎಲ್ಲಾ ರೀತಿಯ ಪ್ರಾಣಿಗಳನ್ನು ಮಾಡಿಸಲಾಗಿದೆ. ಅವುಗಳನ್ನು ಸಾರ್ವಜನಿಕರ ಪ್ರದರ್ಶನಕ್ಕಿಡುವ  ಮೂಲಕ  ವಿನೂತನವಾಗಿ ಅಂತರಾಷ್ಟ್ರೀಯ ಆನೆಗಳ ದಿನಾಚರಣೆಯನ್ನು ಆಚರಿಸಲಾಗಿದೆ.

ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ಅಂತರಾಷ್ಟ್ರೀಯ ಆನೆಗಳ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಮಾವುತರ ಮಕ್ಕಳ ಕೈನಿಂದ ಬಿದಿರಿನ ವಸ್ತುಗಳನ್ನು, ಮಣ್ಣಿನಿಂದ ಮಾಡಿದ ಆನೆ, ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಸಾರ್ವಜನಿಕರ ಪ್ರದರ್ಶನಕ್ಕಿಟ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬ ಸಂದೇಶವನ್ನು ಪ್ರವಾಸಿಗರಿಗೆ ರವಾನೆ ಮಾಡಿದರು.

ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ 22 ಆನೆಗಳಿದ್ದು, ಅದರಲ್ಲಿನ ಒಂದು ಮರಿಗೆ ಸಾರ್ವಜನಿಕರು ಹಾಗೂ  ಪ್ರವಾಸಿಗರು ಸೂಚಿಸಿದ ಕೆಲವು ಹೆಸರುಗಳನ್ನು ತೆಗೆದುಕೊಂಡು ಒಂದು ಹೆಣ್ಣು ಮಗುವಿನ ಕೈನಲ್ಲಿ ಆ ಚೀಟಿಯನ್ನು ತೆಗೆಸಿಕೊಳ್ಳುವ ಮೂಲಕ ಆನೆ ಮರಿಗೆ ‘ಶೃತಿ’ ಎಂಬ ಹೆಸರನ್ನು ಇಡಲಾಗಿದೆ ಎಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನ ಇಡಿ ವನಶ್ರೀ ತಿಳಿಸಿದ್ರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments