Select Your Language

Notifications

webdunia
webdunia
webdunia
webdunia

ಮುರುಘಾ ಶ್ರೀಗಳ ಬಗ್ಗೆ ಮಠದ ಮಕ್ಕಳ ಮನದಾಳದ ಮಾತುಗಳೇನು?

ಮುರುಘಾ ಶ್ರೀಗಳ ಬಗ್ಗೆ ಮಠದ ಮಕ್ಕಳ ಮನದಾಳದ  ಮಾತುಗಳೇನು?
ಚಿತ್ರದುರ್ಗ , ಶನಿವಾರ, 3 ಸೆಪ್ಟಂಬರ್ 2022 (10:58 IST)
ಚಿತ್ರದುರ್ಗ : ಲೈಂಗಿಕ ಕಿರುಕುಳ ಆರೋಪದ ಮೇಲೆ ಮುರುಘಾ ಮಠದ ಶ್ರೀಗಳು ಜೈಲುಪಾಲಾಗಿದ್ದು, ಮಠದಲ್ಲಿ ನೀರವ ಮೌನ ಆವರಿಸಿದೆ.

ಕಳೆದ ಎರಡು ದಿನಗಳಿಂದ ಶ್ರೀಗಳನ್ನು ಕಂಡಿಲ್ಲ ಎಂದು ಮಠದ ಮಕ್ಕಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

ಶ್ರೀಗಳನ್ನು ನೋಡದೇ ಎರಡು ದಿನ ಕಳೆದಿದೆ. ಎರಡು ದಿನಗಳಿಂದ ನಮಗೆ ದೇವರ ದರ್ಶನ ಇಲ್ಲ. ಶ್ರೀಗಳು ಆರೋಪ ಮುಕ್ತರಾಗಿ ಬರುತ್ತಾರೆ ಎಂದು ಮಠದ ವಿದ್ಯಾರ್ಥಿಗಳು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

ಶ್ರೀಗಳು ನೂರಾರು ಅನಾಥ ಮಕ್ಕಳಿಗೆ ಆಶ್ರಯ ಕೊಟ್ಟಿದ್ದಾರೆ. ತಂದೆ-ತಾಯಿ ಕಳೆದುಕೊಂಡವರಿಗೆ ಶ್ರೀಗಳೇ ತಂದೆ-ತಾಯಿ ಆಗಿದ್ದರು. ಮಠದ ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ತೋರಿಸುತ್ತಿದ್ದರು. ಶ್ರೀಗಳ ಪ್ರೀತಿಯನ್ನು ನಾವು ಎರಡು ದಿನಗಳಿಂದ ಕಳೆದುಕೊಂಡಿದ್ದೇವೆ ಎಂದು ದುಃಖದಿಂದ ಮಕ್ಕಳು ನುಡಿದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಂಡರ್ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ!