Select Your Language

Notifications

webdunia
webdunia
webdunia
webdunia

ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಿತರಕ್ಷಣಾ ವೇದಿಕೆ ಒತ್ತಾಯ

ನಗರದಲ್ಲಿ  ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ  ಕ್ರಮ ತೆಗೆದುಕೊಳ್ಳುವಂತೆ ಹಿತರಕ್ಷಣಾ ವೇದಿಕೆ ಒತ್ತಾಯ
ಮಡಿಕೇರಿ , ಭಾನುವಾರ, 13 ಫೆಬ್ರವರಿ 2022 (21:18 IST)
ಮಡಿಕೇರಿಯ ವಾರ್ಡ್ ನಂಬರ್ 20ರ  ಚಾಮುಂಡೇಶ್ವರಿ ನಗರದ ಹಾಲಿನ ಅಂಗಡಿಯ ಸಮೀಪದ ರಸ್ತೆಯ ಬದಿಯಲ್ಲಿ ಕೆಲವು ಹೋಂಸ್ಟೇಗಳ  ಕಸಗಳನ್ನು ಬಿಯರ್ ಬಾಟಲಿ  ಕೆ. ಫ್. ಸಿ ಚಿಕನ್ ನ ಪ್ಯಾಕೆಟ್ ಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು  ತಂದು ಹಾಕುತ್ತಿರುವುದು ಕಂಡು ಬರುತ್ತಿದೆ  ನಗರಸಭೆಯಿಂದ ಇಲ್ಲಿ ಕಸ ಹಾಕಬಾರದು ಎಂದು ಫ್ಲಕ್ಸ್  ಅಳವಡಿಸಿದರು ತಮಗೇನು ಸಂಬಂಧವಿಲ್ಲದಂತೆ  ಅದರ ಬುಡದಲ್ಲೇ ತಂದು ಹಾಕುತ್ತಿರುವುದು ಕಂಡುಬರುತ್ತಿದೆ ಈ ಕಸದ ಬ್ಯಾಗ್ ಗಳನ್ನು ನಾಯಿಗಳು ಎಲ್ಲೆಂದರಲ್ಲಿ ಎಳೆದು ಕೊಂಡು  ರಸ್ತೆಯಲ್ಲೆಲ್ಲ  ಹರಡಿ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಡಲು  ತುಂಬಾ ತೊಂದರೆಯಾಗುತ್ತಿದೆ ಇದಕ್ಕೂ ಮೊದಲು ಇದೇ ಜಾಗದಲ್ಲಿ  ನಗರಸಭೆಯ ವತಿಯಿಂದ ಒಂದು  ತೊಟ್ಟಿ  ಇರಿಸಲಾಗಿತ್ತು ಈ ತೊಟ್ಟಿ ಯಲ್ಲಿ ಇದ್ದ ಕಸಗಳನ್ನೆಲ್ಲ  ಬೀದಿನಾಯಿಗಳು ರಸ್ತೆಯಲ್ಲಿ ಎಲ್ಲ ಹರಡುತ್ತಿದ್ದವು ಅದರಿಂದ ಹಿತರಕ್ಷಣಾ  ವೇದಿಕೆಯು  ಆಗಿನ ಪೌರಾಯುಕ್ತರು ಹಾಗೂ   ನಗರಸಭಾ  ಅಧ್ಯಕ್ಷರ ಗಮನಕ್ಕೆ ತಂದು  ಆ ತೊಟ್ಟಿಯನ್ನು  ಅಲ್ಲಿಂದ  ತೆರವು ಮಾಡಿಸಿ ವೇದಿಕೆ ವತಿಯಿಂದ ಕಸ  ಹಾಕದಂತೆ ನಾಮಫಲಕವನ್ನು ಅಳವಡಿಸಲಾಗಿತ್ತು  ಈಗ ಕೆಲವು ಹೋಂಸ್ಟೇ ಯವರು  ಇಲ್ಲಿ ಕಸ ಗಳನ್ನು  ತಂದು ಹಾಕುತ್ತಿರುವುದು  ಕಂಡುಬರುತ್ತಿದೆ  ಇಲ್ಲಿ ಕಸ ಹಾಕುವವರ ವಿರುದ್ದ  ನಗರಸಭೆ ಆದಷ್ಟು ಬೇಗ ಕ್ರಮ ತೆಗೆದುಕೊಂಡು ಎಲ್ಲೆಂದರಲ್ಲಿ ಕಸ ಹಾಕುವ ಹೋಂಸ್ಟೇಗಳ  ವಿರುದ್ಧ ಸೂಕ್ತ  ಕ್ರಮ ತೆಗೆದುಕೊಂಡು ಅವರುಗಳಿಗೆ ದಂಡ ವಿಧಿಸಿ ಅವರುಗಳ ಪರವಾನಗಿಯನ್ನು   ರದ್ದು ಮಾಡಬೇಕು ಹಾಗೂ ನಗರಸಭೆ ವತಿಯಿಂದ ಈ ಸ್ಥಳದಲ್ಲಿ  ಒಂದು ಸಿಸಿ ಕ್ಯಾಮರಾವನ್ನು ಅಳವಡಿಸಬೇಕಾಗಿದೆ  ಸ್ಥಳೀಯ ನಾಗರಿಕರು  ಹಾಗೂ  ಹಿತರಕ್ಷಣಾ ವೇದಿಕೆವತಿಯಿಂದ ಮನವಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜುಗಳಲ್ಲಿ ಮೊಬೈಲ್‌ ನಿಷೇಧ: ಈ ಬಗ್ಗೆ ಸಚಿವ ಅಶ್ವತ್ಥ‌ ನಾರಾಯಣ ಹೇಳಿದ್ದೇನು..?