Select Your Language

Notifications

webdunia
webdunia
webdunia
webdunia

`ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆ ಮಾಡಲು ಬಿಡಲ್ಲ’

`ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆ ಮಾಡಲು ಬಿಡಲ್ಲ’
bengaluru , ಬುಧವಾರ, 1 ಮಾರ್ಚ್ 2017 (19:17 IST)
ಕನ್ನಡಿಗರ ವಿರೋಧದ ನಡುವೆಯೂ ಡಬ್ಬಿಂಗ್ ಚಿತ್ರ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ತಮಿಳಿನ ನಟ ಅಜಿತ್ ಅಭಿನಯದ ಯೆನ್ನಯ್ ಅರಿಂದಲ್  ಕನ್ನಡಕ್ಕೆ ಡಬ್ ಆಗಿದ್ದು, ಸತ್ಯದೇವ್ ಐಪಿಎಸ್ ಹೆಸರಿನಲ್ಲಿ ಮಾರ್ಚ್ 3ಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಈ ಮಧ್ಯೆ, ಡಬ್ಬಿಂಗ್ ಸಿನಿಮಾ ಬಿಡುಗಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಪ್ರೆಸ್ ಕ್ಲಬ್`ನಲ್ಲಿ ಸುದ್ದಿಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್, ನಟ ಜಗ್ಗೇಶ್, ಎಂ.ಎಸ್. ರಮೇಶ್ ಮತ್ತಿತರರು ಡಬ್ಬಿಂಗ್ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಜೈಲಿಗೆ ಹೋದರೂ ಸರಿಯೇ ಡಬ್ಬಿಂಗ್ ಸಿನಿಮಾವನ್ನ ರಾಜ್ಯದಲ್ಲಿ ಬಿಡುಗಡೆ ಮಾಡಲು ನಾವು ಬಿಡಲ್ಲ. ಡಬ್ಬಿಂಗ್ ಸಿನಿಮಾ ಬಿಡುಗಡೆಯಾಗುವ ಥಿಯೇಟರ್`ಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಚ್ 3ರಂದು ರಾಜ್ಯದ 60 ಥಿಯೇಟರ್`ಗಳಲ್ಲಿ ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆಗೆ ಉದ್ದೇಶಿಸಲಾಗಿದೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗರ ಬೆಳಗಾವಿ ಪಾಲಿಕೆ ಎಂಇಎಸ್ ಪಾಲು