Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪ್ರಭಾವ ತಗ್ಗಿಸಲು ಬಸವೇಶ್ವರ ಪತ್ಥಳಿಗೆ ಅವಮಾನ ಮಾಡಿದ ದುರುಳರು!

ಕಾಂಗ್ರೆಸ್ ಪ್ರಭಾವ ತಗ್ಗಿಸಲು ಬಸವೇಶ್ವರ ಪತ್ಥಳಿಗೆ ಅವಮಾನ ಮಾಡಿದ ದುರುಳರು!
ವಿಜಯಪುರ , ಶನಿವಾರ, 21 ಜನವರಿ 2017 (18:43 IST)
ವಿಜಯಪುರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಜುನ್ ಗುಣದಾಳ, ಮಹೇಶ್ ಗುಣದಾಳ ಹಾಗೂ ರಮೇಶ್ ಪಾಟೀಲ್ ಎಂಬ ಆರೋಪಿಗಳನ್ನು ಬಬಲೇಶ್ವರ್ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಸಕ್ರೀಯ ಬಿಜೆಪಿ ಕಾರ್ಯಕರ್ತರ ಮಕ್ಕಳು ಎಂದು ತಿಳಿದು ಬಂದಿದೆ. 
 
ಎಪಿಎಂಸಿ ಚುನಾವಣೆಯಲ್ಲಿ ನಿಡೋಣಿ ಗ್ರಾಮದ ಜನರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದರು. ಹೀಗಾಗಿ ಕಾಂಗ್ರೆಸ್ ಪ್ರಭಾವವನ್ನು ತಗ್ಗಿಸಲು ಈ ಕೃತ್ಯ ಎಸಗಲಾಗಿದೆ ಎಂದು ಬಂಧಿತರು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. 
 
ಬಂಧಿತ ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರ ಮಾಡಲು ಎಸ್‌ಪಿ ಸಿದ್ರಾಮಪ್ಪ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಲ್ಲಿಕಟ್ಟುಗೆ ಜೈ: ಸುಗ್ರಿವಾಜ್ಞೆ ಜಾರಿ