Select Your Language

Notifications

webdunia
webdunia
webdunia
webdunia

ಸವದಿ ಪ್ರಕರಣಕ್ಕೂ ಸೇಠ್ ಪ್ರಕರಣಕ್ಕೂ ಹೋಲಿಸಲಾಗದು: ಸಿಎಂ ಸಿದ್ದರಾಮಯ್ಯ

ಸವದಿ ಪ್ರಕರಣಕ್ಕೂ  ಸೇಠ್ ಪ್ರಕರಣಕ್ಕೂ ಹೋಲಿಸಲಾಗದು: ಸಿಎಂ ಸಿದ್ದರಾಮಯ್ಯ
ತುಮಕೂರು , ಮಂಗಳವಾರ, 15 ನವೆಂಬರ್ 2016 (11:49 IST)
ವಿಧಾನಸೌಧದಲ್ಲಿ ಕುಳಿತು ಬ್ಲೂಫೀಲ್ಮ್ ವೀಕ್ಷಿಸಿದ್ದ ಮಾಜಿ ಸಚಿವ ಲಕ್ಷಣ ಸವದಿ ಪ್ರಕರಣಕ್ಕೂ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರಕರಣಕ್ಕೂ ಹೋಲಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಜಯಂತಿ ಆರಚರಣೆ ವೇಳೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಸಚಿವರಿಂದ ವರದಿ ತರಿಸಿಕೊಂಡಿದ್ದೇನೆ ಎಂದರು.
 
ಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದ್ದು, ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕಿ ಅತ್ಯಾಚಾರ ಹತ್ಯೆ ಆರೋಪಿ ಬಂಧನ