Select Your Language

Notifications

webdunia
webdunia
webdunia
webdunia

ನೋಟು ನಿಷೇಧ 4 ತಿಂಗಳ ಹಿಂದೆ ತಿಳಿದಿತ್ತು ಎಂದ ಬಿಜೆಪಿ ಮುಖಂಡ: ದೂರು ದಾಖಲು

ನೋಟು ನಿಷೇಧ 4 ತಿಂಗಳ ಹಿಂದೆ ತಿಳಿದಿತ್ತು ಎಂದ ಬಿಜೆಪಿ ಮುಖಂಡ: ದೂರು ದಾಖಲು
ಬೆಂಗಳೂರು , ಮಂಗಳವಾರ, 22 ನವೆಂಬರ್ 2016 (14:34 IST)
ಕಪ್ಪು ಹಣ ತಡೆಗಟ್ಟಲು ಹಳೆಯ ನೋಟುಗಳನ್ನು ರದ್ದು ಮಾಡಿ ಹೊಸ 2000 ಮುಖಬೆಲೆಯ ನೋಟುಗಳು ಬರುತ್ತವೆ ಎಂದು 4 ತಿಂಗಳ ಹಿಂದೆಯೇ ತಿಳಿದಿತ್ತು ಎಂಬ ಮಾಹಿತಿಯನ್ನು ನೀಡಿರುವ ಹೇಳಿಕೆಯ ಕುರಿತು ತನಿಖೆ ನಡೆಸಬೇಕೆಂದು ಮಾಜಿ ಸಚಿವ ಎಸ್.ಎ.ರಾಮದಾಸ್ ವಿರುದ್ಧ ದೂರು ದಾಖಲಾಗಿದೆ.
 
ದೇಶಾದ್ಯಂತ ನೋಟು ಬ್ಯಾನ್ ಮಾಡಿದ ಬೆನ್ನಲ್ಲೆ 500, 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ 2000 ಮುಖಬೆಲೆಯ ಹೊಸ ನೋಟುಗಳು ಬರುತ್ತವೆ ಎನ್ನುವ ವಿಚಾರ 4 ತಿಂಗಳ ಹಿಂದೆಯೇ ತಿಳಿದಿತ್ತು ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವರ ವಿರುದ್ಧ ಎಸ್ಎಸ್‌ಯುಐ ಸಂಘಟನೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದೆ. 
 
ನೋಟು ಬ್ಯಾನ್ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಿಗೆ ಮಾಹಿತಿ ನೀಡಿದ ಆರ್‌ಬಿಐ ಅಧಿಕಾರಿ ಯಾರು ಎನ್ನುವ ಕುರಿತು ತನಿಖೆ ನಡೆಸಬೇಕೆಂದು ಎಸ್ಎಸ್‌ಯುಐ ಸಂಘಟನೆ ಆಗ್ರಹಿಸಿದೆ. 
 
500, 1000 ಮುಖಬೆಲೆಯ ನೋಟುಗಳು ಬ್ಯಾನ್ ಆಗಿ 2000 ಮುಖಬೆಲೆಯ ನೋಟುಗಳು ಬರುತ್ತವೆ ಎಂದು ನಾನೇ ಮೊದಲು ಹೇಳಿಕೆ ನೀಡಿಲ್ಲ. ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿದ್ದು, ಈ ಕುರಿತು ನಾನು ಯಾವುದೇ ತನಿಖೆಗೆ ಸಿದ್ಧ ಎಂದು ಮಾಜಿ ಸಚಿವ ರಾಮದಾಸ್ ಸ್ಪಷ್ಟಪಡಿಸಿದ್ದಾರೆ. 
 
ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದ್ದು, ನನ್ನನ್ನು ಏಕವಚನದಲ್ಲಿ ನಿಂದಿಸಲಾಗಿದೆ ಎಂದು ತಮ್ಮ ಕಾರ್ಯಕರ್ತರ ಮೂಲಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬರುವ ಚುನಾವಣೆ ನಂತ್ರ ಮೋದಿ ಸರ್ಕಾರ ಪತನ: ಸೋನಿಯಾ ಗಾಂಧಿ