Select Your Language

Notifications

webdunia
webdunia
webdunia
webdunia

ಬಿಜೆಪಿ ಪಕ್ಷಕ್ಕೆ ನೆಗಡಿಯಷ್ಟೆ ಬಂದಿದೆ, ಕ್ಯಾನ್ಸರ್ ರೋಗ ಬಂದಿಲ್ಲ: ಈಶ್ವರಪ್ಪ

ಬಿಜೆಪಿ ಪಕ್ಷಕ್ಕೆ ನೆಗಡಿಯಷ್ಟೆ ಬಂದಿದೆ, ಕ್ಯಾನ್ಸರ್ ರೋಗ ಬಂದಿಲ್ಲ: ಈಶ್ವರಪ್ಪ
ಬೆಂಗಳೂರು , ಮಂಗಳವಾರ, 7 ಮಾರ್ಚ್ 2017 (13:31 IST)
ಬಿಜೆಪಿ ಪಕ್ಷಕ್ಕೆ ನೆಗಡಿಯಷ್ಟೆ ಬಂದಿದೆಯೇ ಹೊರತು ಬೇರೆ ರೋಗ ಬಂದಿಲ್ಲ ಎಂದು ಪಕ್ಷದಲ್ಲಿರುವ ಭಿನ್ನಮತ ಕುರಿತಂತೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿವರಿಸಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಅಸಮಾಧಾನವಿರುವುದು ಸತ್ಯ ಸಂಗತಿ. ನಾವೆಲ್ಲರು ಒಂದು ಕಡೆ ಕುಳಿತು ಅಸಮಾಧಾನವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
 
ಪಕ್ಷದಲ್ಲಿ ಅಸಮಾಧಾನವಿದೆ ಎಂದ ಮಾತ್ರಕ್ಕೆ ಪಕ್ಷವನ್ನು ತೊರೆದುಹೋಗುವಂತಹದಲ್ಲ. ದೇಶದಲ್ಲಿಯೇ ಬೃಹತ್ ಪಕ್ಷವಾದ ಬಿಜೆಪಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಅವುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗುತ್ತೇವೆ ಎಂದು ತಿಳಿಸಿದ್ದಾರೆ.  
 
ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ತಾರತಮ್ಯವಾಗಿದೆ. ಅದನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎನ್ನುವುದು ಈಶ್ವರಪ್ಪ ಬಣದ ಆರೋಪವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆ: ಐ ಡೋಂಟ್ ರಿಯಾಕ್ಟ್ ಎಂದ ಸಿಎಂ ಸಿದ್ದರಾಮಯ್ಯ