Select Your Language

Notifications

webdunia
webdunia
webdunia
webdunia

ನಮಗೆ ಜನ ಬಲ, ದೈವಬಲವೂ ಇದೆ: ಯಡಿಯೂರಪ್ಪ

ನಮಗೆ ಜನ ಬಲ, ದೈವಬಲವೂ ಇದೆ: ಯಡಿಯೂರಪ್ಪ
ಬಾಳೆಹೊನ್ನೂರು , ಶುಕ್ರವಾರ, 10 ಮಾರ್ಚ್ 2017 (14:32 IST)
ನಾವು ವೋಟುಗಳನ್ನು ಜೇಬಿನಲ್ಲಿಟ್ಟುಕೊಂಡು ಓಡಾಡುವುದಿಲ್ಲ ನಮಗೆ ದೈವಬಲ, ಜನಬಲವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಎರಡೂ ಕ್ಷೇತ್ರಗಳಲ್ಲೂ ಜಯಗಳಿಸಲಿದೆ. ಪಂಚರಾಜ್ಯಗಳ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಸಿಎಂ ಸಿದ್ದರಾಮಯ್ಯ ನಾವು ಜೇಬಿನಲ್ಲಿ ವೋಟುಗಳನ್ನಿಟ್ಟುಕೊಂಡು ಓಡಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ನಾವು ಜೇಬಿನಲ್ಲಿ ವೋಟುಗಳನ್ನಿಟ್ಟುಕೊಂಡು ತಿರುಗುವುದಿಲ್ಲ ಎಂದು ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈ ಹೇಳಿಕೆ ಕಾಮಿಡಿ ಶೋ ಆಗ್ತಿದೆ: ದಿನೇಶ್ ಗುಂಡೂರಾವ್