Select Your Language

Notifications

webdunia
webdunia
webdunia
webdunia

ನಮಗೆ ಯಾರ ರುಂಡವೂ ಬೇಕಾಗಿಲ್ಲ: ಎಚ್.ಡಿ.ರೇವಣ್ಣ ತಿರುಗೇಟು

ನಮಗೆ ಯಾರ ರುಂಡವೂ ಬೇಕಾಗಿಲ್ಲ: ಎಚ್.ಡಿ.ರೇವಣ್ಣ ತಿರುಗೇಟು
ಹಾಸನ , ಸೋಮವಾರ, 24 ಜುಲೈ 2017 (17:45 IST)
ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ರೆ ರುಂಡವನ್ನು ಕತ್ತರಿಸಿಕೊಳ್ಳುವುದಾಗಿ ಹೇಳಿದ್ದ ಜಮೀರ್ ಅಹ್ಮದ್ ಖಾನ್‌ಗೆ ತಿರುಗೇಟು ನೀಡಿದ ಜೆಡಿಎಸ್‌ ಮುಖಂಡ ಎಚ್.ಡಿ.ರೇವಣ್ಣ, ನಮಗೆ ಯಾರ ರುಂಡವೂ ಬೇಕಾಗಿಲ್ಲ ಎಂದು ಹೇಳಿದ್ದಾರೆ.
 
ಕಾಂಗ್ರೆಸ್ ಪಕ್ಷದಲ್ಲಿ ವೆಕೆನ್ಸಿಯಿರುವುದರಿಂದ ಅಲ್ಲಿಗೆ ಹೋಗಿದ್ದಾರೆ. ಮಿಠಾಯಿ ಗಿಠಾಯಿ ಸಿಗುತ್ತದೆ ಎನ್ನುವ ಆಸೆ ಇರಬಹುದು. ಡಿಸೆಂಬರ್ ವರೆಗೆ ಯಾಕೆ ಕಾಯುವುದು. ಇವತ್ತೇ ಕಾಂಗ್ರೆಸ್ ಪಕ್ಷ ಸೇರಲಿ ಎಂದು ಟಾಂಗ್ ನೀಡಿದ್ದಾರೆ.
 
ದಿನಬೆಳಗಾದ್ರೆ ಜೆಡಿಎಸ್ ಪಕ್ಷದ ಬಗ್ಗೆ ಟೀಕಿಸುತ್ತಾರೆ. ಬಂಡಾಯ ಶಾಸಕರಿಗೆ ನೈತಿಕತೆಯಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ ಎಂದು ಸವಾಲ್ ಹಾಕಿದರು.
 
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

‘ಜಮೀರ್ ಅಹಮ್ಮದ್ ರುಂಡ ತಗೊಂಡು ನಾವೇನು ಮಾಡೋಣ?’