Publish Date: Thu, 18 May 2023 (14:20 IST)
Updated Date: Thu, 18 May 2023 (13:25 IST)
ವಿರೋಧ ಪಕ್ಷದಲ್ಲಿರುವ ಮಾಜಿ ಶಾಸಕ ಸುಧಾಕರ್ ಹಾಗೂ ಮಾಜಿ ಸಚಿವ ಎಸ್.ಟಿ ಸೊಮಶೇಖರ್ ಯಾವ ಕಾರಣಕ್ಕೆ ಟ್ಟೀಟ್ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕುಣಿಗಲ್ ಶಾಸಕ ರಂಗನಾಥ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಅಡಿದ ಅವರು, ನಮ್ಮ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದವರು.. ಯಾವತ್ತು ಕೂಡ ಪಕ್ಷಕ್ಕೆ ದ್ರೋಹ ಮಾಡೋದಿಲ್ಲ.. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಪಕ್ಷ ಕಟ್ಟಿ ಬೆಳೆಸುವ ಮೂಲಕ ಇಂದು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದ್ರು.. ನಮ್ಮ ಪಕ್ಷದಲ್ಲಿ ಯಾರೇ ಮುಖ್ಯಮಂತ್ರಿಯಾದರು ಅವರು ನಮ್ಮ ನಾಯಕರು ಹಾಗೂ ನಮ್ಮ ಕಾಂಗ್ರೆಸ್ ಪಕ್ಷದ ಕುಟುಂಬದವರು ಯಾರೇ ಸಿಎಂ ಆದರೂ ನಮಗೆ ಸಂತೋಷವಿದೆ. ಡಿ.ಕೆ ಶಿವಕುಮಾರ್ ಕೂಡ KPCC ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಗಲಿರುಳು ದುಡಿದ್ದಿದ್ದಾರೆ. ಯಾರೇ ಸಿಎಂ ಆದರೂ ನಮಗೆ ಸಂತೋಷವಿದೆ ಎಂದು ಹೇಳಿದರು.