ಕು​ಮಾ​ರ​ಸ್ವಾಮಿ ಹಾಗೂ ಬಂಗಾ​ರ​ಪ್ಪ ಮಕ್ಕಳು, ಮೊಮ್ಮ​ಕ್ಕಳೇ ರಾಜ​ಕೀಯ ಮಾಡ​ಬೇ​ಕಾ? ವಿಧಾ​ನ​ಸೌಧ ಇವರ ಅಪ್ಪನ ಮನೆಯ? -ಹಿರಿಯ ಸಾಹಿತಿ ಕುಂ.ವೀ​ರ​ಭ​ದ್ರಪ್ಪ

Webdunia
ಗುರುವಾರ, 4 ಅಕ್ಟೋಬರ್ 2018 (13:09 IST)
ಧಾರವಾಡ : ರಾಜ​ಕಾ​ರಣ ಬರೀ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಹಾಗೂ ಬಂಗಾ​ರ​ಪ್ಪ​ನಂಥವ​ರಿಗೆ ಮಾತ್ರ ಸೀಮಿ​ತ​ವೇ? ಅವರು ಹಾಗೂ ಅವರ ಮಕ್ಕಳು, ಮೊಮ್ಮ​ಕ್ಕಳೇ ರಾಜ​ಕೀಯ ಮಾಡ​ಬೇ​ಕಾ? ಎಂದು ಕುಟುಂಬ ರಾಜ​ಕಾ​ರ​ಣದ ವಿರುದ್ಧ ಹಿರಿಯ ಸಾಹಿತಿ ಕುಂ.ವೀ​ರ​ಭ​ದ್ರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಕರ್ನಾಟಕ ನವ ನಿರ್ಮಾಣ ಸೇನೆ ಧಾರ​ವಾ​ಡ​ದಲ್ಲಿ ಬುಧ​ವಾರ ಆಯೋ​ಜಿ​ಸಿದ್ದ ಪ್ರತ್ಯೇಕ ರಾಜ್ಯ​ಅ​ಧಿ​ಕಾ​ರಕ್ಕೋ ಅಥವಾ ಅಭಿ​ವೃ​ದ್ಧಿಗೋ ವಿಷಯ ಕುರಿತು ವಿಚಾರ ಸಂಕಿ​ರ​ಣ​ದಲ್ಲಿ ಮಾತ​ನಾ​ಡಿದ ಅವರು,’ ರಾಜ​ಕಾ​ರಣ ಬರೀ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಹಾಗೂ ಬಂಗಾ​ರ​ಪ್ಪ​ನಂಥವ​ರಿಗೆ ಮಾತ್ರ ಸೀಮಿ​ತ​ವೇ? ಅವರು ಹಾಗೂ ಅವರ ಮಕ್ಕಳು, ಮೊಮ್ಮ​ಕ್ಕಳೇ ರಾಜ​ಕೀಯ ಮಾಡ​ಬೇ​ಕಾ? ಅವರೇ ಎಂಎಲ್‌ಎ ಆಗಬೇಕಾ? ವಿಧಾ​ನ​ಸೌಧ ಇವರ ಅಪ್ಪನ ಮನೆಯ’ ಎಂದು ಟೀಕಿಸಿದ್ದಾರೆ.


‘ಎಲ್ಲ ಪಕ್ಷದ ರಾಜಕಾರಣಿಗಳೂ ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಮುನ್ನಡೆಸಲು ಯತ್ನಿಸುತ್ತಿದ್ದಾರೆ. ವಿಧಾ​ನ​ಸೌ​ಧ​ದಲ್ಲಿ ನೀವೇ ತುಂಬಿ​ಕೊಂಡಿ​ರ​ಬೇ​ಕಾ? ನಾವೂ ಚುನಾ​ವ​ಣೆಗೆ ನಿಲ್ಲ​ಬೇಕು, ನಾವೂ ಎಂಎ​ಲ್‌ಎ ಆಗ​ಬೇ​ಕೆಂಬ ಆಸೆ ಯುವ​ಕ​ರಿ​ಗಿದ್ದು ಇದನ್ನು ಪ್ರಶ್ನಿ​ಸುವ ಗುಣ​ ಬೆಳೆ​ಸಿ​ಕೊಳ್ಳಬೇ​ಕು. ದೇಶದ ದೊಡ್ಡಶಕ್ತಿ ಯುವ​ಕ​ರಾ​ಗಿದ್ದು, ರಾಜ್ಯದ ಭವಿಷ್ಯ ರೂಪಿ​ಸುವಲ್ಲಿ ಪಣ​ತೊಡಿ ಎಂದು ಹೇಳುವುದರ ಮೂಲಕ ಅವರು ರಾಜ್ಯದ ಯುವಕರನ್ನು ಹುರಿದುಂಬಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದ ಸೌಜನ್ಯಾ ಪ್ರಕರಣ: ಸಿಬಿಐ ತನಿಖಾ ವೈಖರಿಗೆ ಸುಪ್ರೀಂ ಕೆಂಡಾಮಂಡಲ, ಮರು ತನಿಖೆಗೆ ತಾತ್ವಿಕ ಒಪ್ಪಿಗೆ

ಕಳೆದ ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ: ರಾಹುಲ್ ಗಾಂಧಿ

ಶಾಲಾ ಬಸ್ ಮೇಲೆ ಬಿದ್ದ ಬೃಹತ್ ಮರ, ಯುಕೆಜಿ ಬಾಲಕಿ ಸಾವು, ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

NEET UG Paper Leak: ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ ಹೊಸ ಷರತ್ತುಗಳನ್ನು ಹಾಕಬಾರದು

ಜಂತರ್‌ ಮಂತರ್‌ನಲ್ಲಿ ಲಾಠಿಚಾರ್ಜ್‌ ವೇಳೆ ಹೆಣ್ಣುಮಕ್ಕಳನ್ನು ಅಸಭ್ಯವಾಗಿ ಮುಟ್ಟಿಲಾಗಿದೆ: ಬಿಕೆ ಹರಿಪ್ರಸಾದ್

ಮುಂದಿನ ಸುದ್ದಿ
Show comments