Select Your Language

Notifications

webdunia
webdunia
webdunia
webdunia

ಗೋರಕ್ಷಣೆ ಹೆಸರಲ್ಲಿ ಹಿಂಸೆ ಸರಿಯಲ್ಲ: ಪ್ರಧಾನಿ ಮೋದಿ ತಾಕೀತು

ಗೋರಕ್ಷಣೆ ಹೆಸರಲ್ಲಿ ಹಿಂಸೆ ಸರಿಯಲ್ಲ: ಪ್ರಧಾನಿ ಮೋದಿ ತಾಕೀತು
ಸಾಬರಮತಿ , ಗುರುವಾರ, 29 ಜೂನ್ 2017 (13:37 IST)
ಗೋರಕ್ಷಣೆ ಹೆಸರಲ್ಲಿ ಜನರನ್ನು ಹತ್ಯೆ ಮಾಡುವುದು ತಪ್ಪು. ಅಹಿಂಸೆ ಮಾರ್ಗದಲ್ಲಿಯೇ ಮುನ್ನಡೆಯಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
 
ಗೋ ಸಂರಕ್ಷಣೆಯ ನೆಪದಲ್ಲಿ ಜನರನ್ನು ಹತ್ಯೆ ಮಾಡುತ್ತಿರುವ ವರದಿಗಳು ಆತಂಕಕಾರಿಯಾಗಿವೆ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ ಎಂದು ಗುಡುಗಿದ್ದಾರೆ.
 
ಗುಜರಾತ್‌ನ ಸಾಬರಮತಿ ಆಶ್ರಮದಲ್ಲಿ ಮಾತನಾಡಿದ ಅವರು, ನಾವು ಅಹಿಂಸಾ ಮಾರ್ಗವನ್ನು ಅನುಸರಿಸಬೇಕು.. ದೇಶ ಅಹಿಂಸೆಯ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ತಿಳಿಸಿದ್ದಾರೆ.
 
 ಗೋರಕ್ಷಣೆಯ ನೆಪದಲ್ಲಿ ಅಮಾಯಕರನ್ನು ಹಿಂಸೆಗೊಳಪಡಿಸುವುದು ಮಾನವೀಯತೆಯಲ್ಲ. ಆದ್ದರಿಂದ ಹಿಂಸೆಯನ್ನು ತೊರೆದು ಅಹಿಂಸೆಯನ್ನು ಅಳವಡಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದುಗಳಲ್ಲಿಯೂ ಗೋಮಾಂಸ ಸೇವಿಸುವವರು ಇದ್ದಾರೆ: ಪೇಜಾವರ್ ಹೇಳಿಕೆಗೆ ಮುತಾಲಿಕ್ ಕಿಡಿ