Select Your Language

Notifications

webdunia
webdunia
webdunia
webdunia

ಸಚಿವ ರಮಾನಾಥ ರೈ ಪುತ್ರನಿಗೆ ಬಾರಕೋಲಿನಿಂದ ಬಾರಿಸಿದ ಗ್ರಾಮಸ್ಥರು

ಸಚಿವ ರಮಾನಾಥ ರೈ ಪುತ್ರನಿಗೆ ಬಾರಕೋಲಿನಿಂದ ಬಾರಿಸಿದ ಗ್ರಾಮಸ್ಥರು
ಕೊಡಗು , ಸೋಮವಾರ, 25 ಜುಲೈ 2016 (14:45 IST)
ರಾಜ್ಯ ಅರಣ್ಯ ಹಾಗೂ ಪರಿಸರ ಖಾತೆ ಸಚಿವರ ರಮಾನಾಥ ರೈ ಅವರ ಪುತ್ರ ದೀಪು ರೈ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ತೋರಿ ಪುಂಡಾಟಿಕೆ ಮೆರೆದ ಘಟನೆ ಕೊಡಗಿನ ಶ್ರೀಮಂಗಲಂ ಸಮೀಪದ ಟಿ.ಶೆಟ್ಟಿಗೇರಿಯಲ್ಲಿ ವರದಿಯಾಗಿದೆ.
 
ಮಾಜಿ ಗ್ರಾಮ ಪಂಚಾಯತ ಸದಸ್ಯರ ಮನೆ ಮುಂದೆ ಕಾರು ನಿಲ್ಲಿಸಿ, ಗೆಳೆಯರೊಡನೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ರಾಜ್ಯ ಅರಣ್ಯ ಹಾಗೂ ಪರಿಸರ ಖಾತೆ ಸಚಿವರ ರಮಾನಾಥ ರೈ ಅವರ ಪುತ್ರ ದೀಪು ರೈ, ಅನುಚಿತ ವರ್ತನೆ ತೋರಿ ಪುಂಡಾಟಿಕೆ ಮೆರೆದಿದ್ದಾರೆ ಎಂದು ಹೇಳಲಾಗುತ್ತಿದೆ.
 
ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ತೋರಿ ಪುಂಡಾಟಿಕೆ ಮೇರೆದಿರುವುದನ್ನು ಪ್ರಶ್ನಿಸಿದ ಸ್ಥಳೀಯರಿಗೆ ನಾನು ಮಂತ್ರಿ ಮಗ ನಿಮ್ಮನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಧಮ್ಕಿ ಹಾಕಿದ್ದಲ್ಲದೆ, ಸ್ನೇಹಿತರೊಂದಿಗೆ ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಕ್ರೋಶಗೊಂಡ ಸ್ಥಳಿಯರು ಮಂತ್ರಿ ಪುತ್ರನನ್ನು ಬಾರಕೋಲಿನಿಂದ ಬಾರಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
 
ಪುಂಡಾಟಿಕೆ ಮೆರೆದ ಮಂತ್ರಿ ಪುತ್ರನಿಗೆ ಪೊಲೀಸ್‌ ಠಾಣೆಯಲ್ಲಿ ರಾಜಮರ್ಯಾದೆ ನೀಡಿ, ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರ ವರ್ತನೆಯನ್ನು ಖಂಡಿಸಿ ಸಾರ್ವಜಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೌರವರು-ಪಾಂಡವರ ಮಧ್ಯದ ಪವಿತ್ರ ಯುದ್ಧ: ಬಿಜೆಪಿಗೆ ಕೇಜ್ರಿವಾಲ್ ವಾರ್ನಿಂಗ್